AddMysore Story

ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ಎಂ.ಎಸ್.ನಾರಾಯಣ ಸ್ವೀಟ್ಸ್ ನ 5 ನೇ ನೂತನ ಶಾಖೆ ಆರಂಭ

0

ಮೈಸೂರು- ಸಾಂಸ್ಕೃತಿಕ ನಗರಿ ಮೈಸೂರಿನ ಪ್ರತಿಷ್ಠಿತ ಎಂ.ಎಸ್.ನಾರಾಯಣ ಸ್ವೀಟ್ಸ್ ನ 5 ನೇ ನೂತನ ಶಾಖೆ ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ಆರಂಭವಾಗಿದೆ.

ಈಗಾಗಲೇ ಮೈಸೂರಿನ ಸಿದ್ದಾರ್ಥ ನಗರ, ಕುವೆಂಪುನಗರ, ಗೋಕುಲಂ ಹಾಗೂ ಹೆಬ್ಬಾಳು ಶಾಖೆಯ ಸಕ್ಸಸ್ ನಂತರ ಎನ್.ಆರ್.ಮೊಹಲ್ಲಾದಲ್ಲಿ 5 ನೇ ನೂತನ ಶಾಖೆ ಆರಂಭಗೊಂಡಿದೆ.

ಎಂ.ಎಸ್.ನಾರಾಯಣ ಸ್ವೀಟ್ಸ್ ಮಾಲೀಕರಾದ ಎಂ.ಎಸ್.ನಾರಾಯಣ ಅವರ ಮುಂದಾಳತ್ವದಲ್ಲಿ ಹಲವು ಶಾಖೆಗಳು ಸರಣಿಯಲ್ಲಿ ಆರಂಭಗೊಳ್ಳುತ್ತಿವೆ.

ನಗರದ ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆಯ ಗಣಪತಿ ಟೆಂಪಲ್ ಬಳಿ ನೂತನ ಶಾಖೆ ಆರಂಭಗೊಂಡಿದ್ದು, ಮೊದಲ ದಿನವೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಎಂ.ಎಸ್.ನಾರಾಯಣ ಸ್ವೀಟ್ಸ್ ಹಲವು ಸ್ಪೆಷಲ್ ಸ್ವೀಟ್ಸ್ ಗೆ ಹೆಸರುವಾಸಿಯಾಗಿದೆ. ಇಲ್ಲಿ ಸ್ಪೆಷಲ್ ಕೋಕನೆಟ್ ಮೈಸೂರ್ ಪಾಕ್, ಆರೆಂಜ್ ಬೈಟ್, ಕಾಜು ಬೈಟ್, ಜಾಗರಿ ಡ್ರೈ ಫ್ರೂಟ್ ಲಾಡು, ಜಾಗರಿ ಬರ್ಫಿ, ಜಾಗರಿ ಮೈಸೂರ್ ಪಾಕ್ ಸೇರಿದಂತೆ ವಿಶಿಷ್ಟ ರೀತಿಯ ತರೆವಾರಿ ಸ್ವೀಟ್ಸ್ ಗಳು ಇಲ್ಲಿ ದೊರೆಯುತ್ತದೆ.

ಎಂ.ಎಸ್.ನಾರಾಯಣ ಸ್ವೀಟ್ಸ್ ಒಳಗೆ ಕಾಲಿಡುತ್ತಿದ್ದಂತೆ ಬಾಯಲ್ಲಿ ನೀರೂರಿಸುವ ಒಂದಕ್ಕಿಂತ ಒಂದು ಭಿನ್ನ ಸಿಹಿ ತಿಂಡಿಗಳು ಕಾಣ ಸಿಗುತ್ತದೆ.

ಉತ್ಕೃಷ್ಟ ಗುಣಮಟ್ಟದ, ವಿಶಿಷ್ಟವಾದ ವಯೋವೃದ್ಧರು ಇಷ್ಟ ಪಡುವ ಸ್ವೀಟ್ಸ್ ತಯಾರು ಮಾಡುತ್ತಿದ್ದೇವೆ. ದಿನದಂದ ದಿನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಕಾರಣ ಶಾಖೆಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸ್ವೀಟ್ಸ್ ಮಾಲೀಕ ಎಂ.ಎಸ್.ನಾರಾಯಣ ತಿಳಿಸಿದರು.

ಎಂ.ಎಸ್.ನಾರಾಯಣ ಅವರು ನೂತನ ಶಾಖೆಗಳನ್ನು ಹೆಚ್ಚಿಸಿ ವ್ಯವಹಾರ ವಹಿವಾಟು ವೃದ್ಧಿಸಲು ಅವರ ಪುತ್ರ ಸಾಥ್ ನೀಡುತ್ತಿದ್ದಾರೆ.

siteadmin

ರಾಮನ ಪೂಜೆಗೆ ಬಂದ ಸಂಸದ ಪ್ರತಾಪ್ ಸಿಂಹಗೆ ಘೇರಾವ್- ಒಳಗೆ ಬಿಡದ ಕಾರಣ ವಾಪಾಸು

Previous article

ನಾಪತ್ತೆಯಾಗಿದ್ದ ಶಿಕ್ಷಕಿ ಶವವಾಗಿ ಪತ್ತೆ- ಸಾವಿನ ಸುತ್ತ ಅನುಮಾನದ ಹುತ್ತ

Next article

You may also like

Comments

Leave a reply

Your email address will not be published. Required fields are marked *

More in Add