Politics

ವರುಣದಲ್ಲಿ ಸೋಮಣ್ಣಗೆ ಮತ್ತೆ “ತಪರಾಕಿ”- ಗ್ರಾಮಕ್ಕೆ ಬರಲು ಬಿಡದೆ “ಗೇಟ್ ಪಾಸ್”

0

ಮೈಸೂರು- ಸಿದ್ದರಾಮಯ್ಯ ಅಖಾಡಕ್ಕೆ ಇಳಿದಿರುವ ಮೈಸೂರಿನ ವರುಣದಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣಗೆ ಮತದಾರರು ಮತ್ತೆ ತಪರಾಕಿ ಹಾಕಿದ್ದಾರೆ.

“ಸಂವಿಧಾನ ಬದಲಾಯಿಸುವವರು ನಮ್ಮೂರಿಗೆ ಬರಬೇಡಿ” ಎಂದ ಗ್ರಾಮಸ್ಥರು ವರುಣ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣನಿಗೆ ಗೇಟ್ ಪಾಸ್ ಕೊಟ್ಟಿದ್ದಾರೆ.

ಸಂವಿಧಾನ ಬದಲಿಸುವ ಬಿಜೆಪಿ ಪಕ್ಷದ ಅಭ್ಯರ್ಥಿಗೆ ನಮ್ಮೂರಿಗೆ ನೋ ಎಂಟ್ರಿ ಎಂದಿದ್ದಾರೆ.

ನಂಜನಗೂಡು ತಾಲೂಕಿನ ವರುಣ ಕ್ಷೇತ್ರದ ಬಿಳುಗಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡಿರುವ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ. ಬ್ಯಾಜ್ ಟು ಬ್ಯಾಕ್ ವಿರೋಧ ವ್ಯಕ್ತವಾಗಿದೆ.

“ಗ್ರಾಮಕ್ಕೆ ಬರುವುದಕ್ಕಿಂತ ಮುಂಚೆ ಗೇಟ್ ಪಾಸ್ ಕೊಟ್ಟಿಧದಾರೆ.  ಬಿಳುಗಲಿ ಗ್ರಾಮದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಜಮಾಯಿಸಿದ ಯುವಕರು ಸೋಮಣ್ಣಗೆ ಧಿಕ್ಕಾರ ಕೂಗಿದ್ದಾರೆ.
ಡಾ.ಬಿ.ಆರ್ ಅಂಬೇಡ್ಕರ್ ರಿಗೆ ಜಯಘೋಷ ಕೂಗಿದ್ದಾರೆ. ಸಂವಿಧಾನ ಬದಲಿಸ್ತೀವಿ ಅಂದ್ರೆ ಸುಮ್ಮನಿರಲ್ಲ. ಅಂಬೇಡ್ಕರ್ ವಿರೋಧಿಗಳೆ ನಮ್ಮೂರಿಗೆ ಬರಲು ನಿಮಗೆ ನೈತಿಕತೆ ಇಲ್ಲ.
ಸಂವಿಧಾನದ ಅಡಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ‌. ಸಂವಿಧಾನದ ಅಡಿಯಲ್ಲಿ ಸರ್ಕಾರ ನಡೆಸುವ ಇವರು ಸಂವಿಧಾನ ಬದಲಾಯಿಸುತ್ತೇವೆ ಅಂತಾರೆ. ಇಂತಹ ಸಂವಿಧಾನ ವಿರೋಧಿ ಬಿಜೆಪಿ ಪಕ್ಷಕ್ಕೆ ನಾವು ಮತ ಹಾಕಬೇಕಾ..? ಸಂವಿಧಾನ ಚೇಂಜ್ ಮಾಡಲು ಇವರು ಯಾರು” ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬಿಜೆಪಿ ಮುಖಂಡರು ಕಾರ್ಯಕರ್ತರಿಗೆ ಗ್ರಾಮಸ್ಥರಿಂದ ಪ್ರಶ್ನೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮನವೊಲಿಕೆಗೆ ಯತ್ನಿಸಿದರು. ಆದರೆ ಪಟ್ಟು ಬಿಡದ ಯುವಕರು, ಗ್ರಾಮಸ್ಥರು ಒಪ್ಪಲಿಲ್ಲ. ಈ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.

ಇದರಿಂದ ಸೋಮಣ್ಣ  ಗ್ರಾಮಕ್ಕೆ ಬಾರದೆ ಹೊರಟು ಹೋದರು.

siteadmin

ಮೈಸೂರಿನ ಮೈಲಾರಿ ಹೋಟೆಲ್ ನಲ್ಲಿ ಬೆಣ್ಣೆ ದೋಸೆ ಸವಿದ ಪ್ರಿಯಾಂಕ ಗಾಂಧಿ

Previous article

ನಿನ್ನ “ಬೆತ್ತಲೆ ಪ್ರಪಂಚ”ದ ಪ್ರತಾಪ ನಮ್ಮ ಬಳಿ ಇದೆ- ಪ್ರತಾಪ್ ಸಿಂಹಗೆ ಹಳ್ಳಿಹಕ್ಕಿ ವಾರ್ನಿಂಗ್

Next article

You may also like

Comments

Leave a reply

Your email address will not be published. Required fields are marked *

More in Politics