ಮೈಸೂರು-ಸಿದ್ದರಾಮಯ್ಯ ಇದು ಲೋಕಸಭಾ ಚುನಾವಣೆ ಎಂದು ಮರೆತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಯೋಜನೆ ಹೇಳಿ ಮತ್ತು ರಾಷ್ಟ್ರದಲ್ಲಿ ಮೋದಿ ಕೊಟ್ಟ ಕೊಡುಗೆ ಯೋಜನೆಗಳ ಬಗ್ಗೆ ಚರ್ಚೆಗೆ ಬನ್ನಿ.
ಇದು ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿಕೆ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವಿಭಜನೆ ನೇರವಾಗಿ ಕಾಣುತ್ತಿದೆ.
ಕಾಂಗ್ರೆಸ್ ಗೆ ದೇಶ ವಿಭಜಿಸುವ ರೋಗ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ವಾಸಿಯಾಗಿಲ್ಲ.
ಕಾಂಗ್ರೆಸ್ ತನ್ನ ಸ್ಥಾಪನೆಯಿಂದ ಒಳಗೊಂಡು ಈ ವರೆಗೂ ಇಂತಹ ಕೆಲಸಗಳನ್ನೇ ಮಾಡುತ್ತಾ ಬಂದಿದ್ದಾರೆ.
ಈ ಕುಟುಂಬ ರಾಜಕಾರಣ ಈಗ ರಾಹುಲ್ ಗಾಂಧಿ ಸತತ ಸೋಲಿನ ನಂತರವೂ ಮುಂದುವರೆಸುತ್ತಾ ಬಂದಿದ್ದಾರೆ.
*ಬಹುಶಃ ನಗರ ನಕ್ಸಲಿಯರ ಮೂಲಕ ಈ ಪ್ರನಾಳಿಕೆ ಬಂದಂತೆ ಕಾಣುತ್ತದೆ.*
ದೇಶದ ಅಭಿವೃದ್ಧಿ ಕಡೆಗೆ ನಡೆಯಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಆಗಬೇಕು.
ಮನಮೋಹನ್ ಸಿಂಗ್ ಕಾಲದ ಡೆವಲಪ್ಮೆಂಟ್ ಮತ್ತು ಮೋದಿ ಕಾಲದಲ್ಲಿ ಆದ ಡೆವಲಪ್ಮೆಂಟ್ ಬಗ್ಗೆ ಚರ್ಚೆ ಮಾಡೋಣ ಬನ್ನಿ.
ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆ.
ರಾಷ್ಟ್ರೀಯ ವಿಚಾರಗಳು ಚರ್ಚೆ ಆಗಬೇಕು.
ಮೂಲಭೂತ ಸೌಕರ್ಯ, ಆರ್ಥಿಕ ಅಭಿವೃದ್ಧಿ, ಭಾರತದ ಭವಿಷ್ಯದ ಅಭಿವೃದ್ಧಿ ಚರ್ಚೆ ಆಗಬೇಕು.
ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಹಗರಣಗಳಿಗೆ ಕಾರಣಿಭೂತ ಯಾರು?
ಮನಮೋಹನ್ ಸಿಂಗ್ ಇದ್ದಾಗ ಕೊಟ್ಟ ಅನುದಾನ, ಮೋದಿಯವರು ಕೊಟ್ಟ ಅನುದಾನದ ಬಗ್ಗೆ ಚರ್ಚೆ ನಡೆಸಲು ನಾವು ಸಿದ್ದ.
ನೀವು ನೀತಿ ಬಗ್ಗೆ ಅಲ್ಲ ಜಾತಿ ಬಗ್ಗೆ ಚರ್ಚೆ ನಡೆಸಲಿಕ್ಕೆ ಮುಂದಾಗಿದ್ದೀರಿ.
ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆಯನ್ನು ಯಾವ ಮನದಲ್ಲಿ ಅಳೆಯಿತ್ತೀರಿ.
ದೇವರಾಜ ಅರಸು ಸಾಮಾಜಿಕ ನ್ಯಾಯವನ್ನು ಅಪಮಾನಿಸುವ ರೀತಿ ಮಾತನಾಡುತ್ತೀರ.
ಅಧಿಕಾರಕ್ಕಾಗಿ ಬಳಸಿಕೊಂಡು ಅಹಿಂದ ಎಲ್ಲಿ ಹೋಯ್ತು ಸಿದ್ದರಾಮಯ್ಯರೇ ?
ಒಕ್ಕಲಿಗರು ನೀತಿ ಹಿಂದೆ ಹೋದವರು, ನೀತಿ ಬೆಂಬಲಿಸಿದವರು.
ಮಾಜಿ ಸಚಿವ ಸಿಟಿ ರವಿ ವಾಗ್ದಾಳಿ.
ಇವತ್ತಿನ ಕಾಂಗ್ರೆಸ್ ಕಮ್ಯುನಲ್ ಕಾಂಗ್ರೆಸ್ ಆಗಿ ಬದಲಾವಣೆ ಆಗಿದೆ.
ಇಂದಿನ ಕಾಂಗ್ರೆಸ್ ಕರಪ್ಶನ್ ಇನ್ನೊಂದು ಮುಖವಾಗಿದೆ.
ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಮೋದಿ ಎಂದು ಇಡೀ ದೇಶವೇ ಅನುಸರಿಸುತ್ತಿದೆ.
ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ 28 ಕ್ಷೇತ್ರ ಗೆಲ್ಲುತ್ತೇವೆ.
ನೆರೆಯ ರಾಜ್ಯವಾದ ತಮಿಳುನಾಡಲ್ಲೂ ಬಿಜೆಪಿ ಹಾಗೂ ಎನ್ಡಿಎ ಅಲೆಯನ್ಸ್ ಗೆಲ್ಲುತ್ತದೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆ.
*ಪ್ರೀತಂಗೌಡ- ಪ್ರಜ್ವಲ್ ರೇವಣ್ಣ ನಡುವೆ ಮುನಿಸು ವಿಚಾರ.*
ಪ್ರೀತಮ್ ಗೌಡ ಹೇಳಿಕೆಯನ್ನು ನಾನು ನೋಡಿದ್ದೇನೆ.
ಮೋದಿ ಪ್ರಧಾನಿ ಮಾಡಲಿಕ್ಕೆ ನಾವು ದುಡಿಯುತ್ತೇನೆ ಎಂದು ಹೇಳಿದ್ದಾರೆ.
28 ಕ್ಷೇತ್ರಗಳಲ್ಲಿ ಎನ್ ಡಿಎ ಅಭ್ಯರ್ಥಿ ಗೆಲ್ಲಿಸುವಂತಹ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
28 ಕ್ಷೇತ್ರಗಳಲ್ಲಿ ಹಾಸನ ಕೂಡ ಒಂದು.
ಎನ್ ಡಿಎ ಭಾಗವಾಗಿ ಜೆಡಿಎಸ್ ಇದೆ.
ಹಾಸನದಲ್ಲೂ ಎನ್ ಡಿಎ ಅಭ್ಯರ್ಥಿ ಗೆಲ್ತಾರೆ.
ನೀವು ಫಲಿತಾಂಶ ಬಂದಾಗ ನೋಡಿ.
ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿನಲ್ಲಿ ಬಿಜೆಪಿ ಮತಗಳು ಸಹಕಾರಿಯಾಗಿದೆ ಎಂದು ಗೊತ್ತಾಗುತ್ತೆ.
ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡುವ ಮತದಾರರು ಕಾಂಗ್ರೆಸ್ ಗೆ ಮತ ನೀಡಲ್ಲ.
ಮುಂದಿನ ದಿನಗಳಲ್ಲಿ ಇಬ್ಬರನ್ನು ಕೂರಿಸಿ ಮಾತನಾಡಿಸುವ ಕೆಲಸ ಮಾಡುತ್ತೇವೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆ.
Comments