Politics

ಕೈ ಬಾಡುವುದಿಲ್ಲ, ಕಮಲ, ತೆನೆ ಬಾಡಿ ಹೋಗುತ್ತವೆ

0

ಕೈ ಬಾಡುವುದಿಲ್ಲ, ಒಣಗಿ ಹೋಗುವುದಿಲ್ಲ ಆದರೆ ಕಮಲ ಮತ್ತು ತೆನೆ ಎರಡೂ ಬಾಡಿ ಹೋಗುತ್ತವೆ. ಹುಟ್ಟಿದ ಸೂರ್ಯ ಹೇಗೆ ಮುಳುಗುತ್ತಾನೋ ಅದೇ ರೀತಿ ಕಮಲದ ಹೂ ಬಾಡಿ ಹೋಗಲೇ ಬೇಕು. ಇದು ಕೇವಲ ಹಸ್ತವಲ್ಲ ಎಲ್ಲಾ ದೇವರುಗಳು ಆಶೀರ್ವಾದ ಮಾಡುವ ಹಸ್ತ. ಮತದಾರರು ಕೈಯನ್ನು ಬಲಪಡಿಸಬೇಕು. ರಾಜ್ಯದ ಎಲ್ಲಾ 28 ಕ್ಷೇತ್ರದಲ್ಲೂ ಕಾಂಗ್ರೆಸ್‌ ಪರವಾದ ಅಲೆಯಿದೆ.

ಹೀಗೆಂದು ಹೇಳಿದವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು ಸೆಂಟ್ರಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ  ಮನ್ಸೂರ್ ಅಲಿಖಾನ್ ಪರ ಪ್ರಚಾರ ಮಾಡುವ ವೇಳೆ ಬಿಜೆಪಿ ಮತ್ತು ಜೆಡಿಎಸ್ ಬಗ್ಗೆ ಹೀಗೆ

136 ಸ್ಥಾನಗಳನ್ನು ವಿಧಾನಸಭೆ ಚುನಾವಣೆಯಲ್ಲಿ ನೀಡಿ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಆಸ್ಪದ ಮಾಡಿಕೊಟ್ಟಿದ್ದೀರಿ. ಎಲ್ಲಾ ತಾಯಂದಿರ ಖಾತೆಗೆ 2 ಸಾವಿರ ಹಣ ಪ್ರತಿ ತಿಂಗಳು ಬರುತ್ತಿದೆ. ಉಚಿತ ವಿದ್ಯುತ್‌, ಬಸ್‌ ಪ್ರಯಾಣ, ಅನ್ನಭಾಗ್ಯ, ಯುವನಿಧಿ ಗ್ಯಾರಂಟಿಗಳು ರಾಜ್ಯದ ಅಭಿವೃದ್ಧಿಯ ದಿಕ್ಕನ್ನೇ ಬದಲಾಯಿಸಿವೆ.

ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಹಾಗೂ ನನ್ನ ಮತ್ತು ಎಲ್ಲಾ ಸಂಪುಟ ಸಹೋದ್ಯೋಗಿಗಳ ನಾಯಕತ್ವದಲ್ಲಿ ಕಾಂಗ್ರೆಸ್‌ ಉತ್ತಮ ಆಡಳಿತ ನೀಡುತ್ತಿದೆ. ತೆಲಂಗಾಣದಲ್ಲಿ 6 ಗ್ಯಾರಂಟಿಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿದ್ದೇವೆ. ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ ಅವರ ನಾಯಕತ್ವ ಇಡೀ ದೇಶಕ್ಕೆ ಗ್ಯಾರಂಟಿ ಯೋಜನೆಗಳನ್ನು ನೀಡಲಿದ್ದಾರೆ.

siteadmin

ಮೈಸೂರಿನಲ್ಲಿ ಇನ್ನು ಮುಂದೆ ಬೋರ್ ವೆಲ್ ಕೊರೆಸಲು ಅನುಮತಿ ಕಡ್ಡಾಯ

Previous article

ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ,ಸರ್ವೆಯರ್, ಡಾಟಾ ಎಂಟ್ರಿ ಆಪರೇಟರ್

Next article

You may also like

Comments

Leave a reply

Your email address will not be published. Required fields are marked *

More in Politics