ಚೆನ್ನೈ- ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುದಿಲ್ಲ ಎಂದು ಚಿತ್ರನಟಿಯೂ ಆದ ಬಿಜೆಪಿ ಮುಖಂಡರಾದ ಖುಷ್ಬೂ ಅಚ್ಚರಿ ನಿರ್ಧಾರ ಪ್ರಕಟಿಸಿದ್ದಾರೆ.
ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದು ತಮ್ಮ ತೀರ್ಮಾನ ತಿಳಿಸಿದ್ದಾರೆ.
ದೆಹಲಿಯಲ್ಲಿ 2019 ರಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂಳೆ ಮುರಿದಿದ್ದು, ಹೆಚ್ಚು ಪ್ರಯಾಣ ಮಾಡಲು ಆಗಲ್ಲ ಆದ ಕಾರಣ ಚುನಾವಣಾ ಪ್ರಚಾರಕ್ಕೆ ಬರಲು ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಸ್ಟಾರ್ ಕ್ಯಾಂಪೇನರ್ ಹಾಗೂ ಫೈರ್ ಬ್ರ್ಯಾಂಡ್ ಖಷ್ಬೂ ಹೀಗೆ ಚುನಾವಣಾ ಪ್ರಚಾರದಿಂದ ಹಿಂದೆ ಸರಿದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಖಷ್ಬೂ ಈ ನಿರ್ಧಾರಕ್ಕೆ ಬೇರೆ ಕಾರಣ ಇರಬಹುದು ಎನ್ನಲಾಗಿದೆ.
Comments