ಮೈಸೂರು- ಸಾಂಸ್ಕೃತಿಕ ನಗರಿ ಮೈಸೂರಿನ ಮೈಲಾರಿ ಹೊಟೇಲ್ ನಲ್ಲಿ ಪ್ರಿಯಾಂಕ ಗಾಂಧಿ ದೋಸೆ ತಿಂದು ಖುಷ್ ಆಗಿದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಜೊತೆ ಇಡ್ಲಿ, ದೋಸೆ ಸವಿದರು.
ಮೈಸೂರು ಮೈಲಾರಿ ಹೊಟೇಲ್ ಇಡ್ಲಿ ದೋಸೆಗೆ ಪ್ರಿಯಾಂಕ ಫಿದಾ ಆಗಿದ್ದಾರೆ.
ಮೈಸೂರಿಗೆ ಬಂದಿದ್ದ ಪ್ರಿಯಾಂಕ ಇಂದು ಬೆಳಗಿನ ಉಪಹಾರಕ್ಕೆ ಮೈಲಾರಿ ಹೋಟೆಲ್ ಗೆ ಬಂದಿದ್ದರು. ಈ ವೇಳೆ ನಿಮ್ಮ ಹೋಟೆಲ್ ಸ್ಪೆಷಾಲಿಟಿ ಏನು ಅಂತ ತಿಳಿದ ಪ್ರಿಯಾಂಕ ಗಾಂಧಿ ನೇರವಾಗಿ ಕಿಚನ್ ಗೆ ಹೋದ್ರು. ಅಲ್ಲಿ ತಾವೆ ಮೂರು ದೋಸೆ ಕೂಡ ಹಾಕಿ ವಿಶಿಷ್ಟ ಅನುಭವ ಪಡೆದರು.
ಈ ವೇಳೆ ಮಾತನಾಡಿದ ಪ್ರಿಯಾಂಕ ಗಾಂಧಿ, “ಇಡ್ಲಿ, “ದೋಸೆ ತಿಂದೆ. ತುಂಬಾ ಚೆನ್ನಾಗಿತ್ತು.
ಮನೆಯಲ್ಲಿ ಹೇಗೆ ಮಾಡಬೇಕು ಅನ್ನೋದನ್ನು ತಿಳಿದುಕೊಂಡಿದ್ದೀನಿ. ನಾನು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡ್ತೀನಿ.” ಎಂದರು.
Comments