ಬಾಲಸೋರ್ (ಒಡಿಶಾ)- ಒಡಿಶಾದ ಬಾಲಸೋರ್ ರೈಲು ದುರಂತಕ್ಕೆ “ಕವಚ್” ಸುರಕ್ಷತಾ ವ್ಯವಸ್ಥೆ ಇಲ್ಲದಿರುವುದು ಮೂಲ ಕಾರಣವಾಗಿದೆ.
“ಕವಚ್” ಎಂದರೇನು…?
“ಕವಚ್” ಅಂದರೆ ಸ್ವಯಂ ಚಾಲಿತ ರೈಲು ರಕ್ಷಣೆ. (Automated Train Operations) ಅಂದರೆ ರೈಲು ವೇಗವಾಗಿ ಚಲಿಸುವಾಗ ಅಪಾಯದ ಸಮಯದಲ್ಲಿ ಸಿಗ್ನಲ್ ಪಾಸಿಂಗ್ ಹಾಗೂ ಅತಿ ವೇಗವನ್ನು ನಿಯಂತ್ರಿಸಲು ಪೈಲಟ್ ಗೆ ಸಹಾಯ ಮಾಡುತ್ತದೆ. ತೀರಾ ಅತಿ ವೇಗದಲ್ಲಿ Automated Train Operations ಅದೇ ಸ್ಪೀಡ್ ಕೂಡ ಕಂಟ್ರೋಲ್ ಮಾಡುತ್ತದೆ. ಈ ಮೂಲಕ ಎಲ್ಲಾ ರೀತಿಯ ಸಂಭಾವ್ಯ ಅಪಘಾತವನ್ನು “ಕವಚ್” ತಪ್ಪಿಸುತ್ತದೆ.
ಈ ಯೋಜನೆಗೆ ಕೇವಲ 16.50 ಕೋಟಿ ರೂಪಾಯಿ ವೆಚ್ಚ ಆಗುತ್ತದೆ. ಆದರೆ ಕೇಂದ್ರ ಸರ್ಕಾರ “ಕವಚ್” ಅನುಷ್ಠಾನ ಮಾಡದಿರುವುದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
Comments