ಮಂಗಳೂರು- ಉಗ್ರ ಶಾರಿಖ್ ಮಂಗಳೂರಿನಲ್ಲಿ ಮಹಾಸ್ಫೋಟಕ್ಕೆ ಸ್ಕೆಚ್ ಹಾಕಿದ್ದನು. ದೇವಸ್ಥಾನಗಳೆ ಇವನ ಟಾರ್ಗೆಟ್ ಆಗಿತ್ತು. ಇನ್ನು ಈ ಉಗ್ರ ಕೃತ್ಯದ ಹೊಣೆಯನ್ನು ಇಸ್ಲಾಮಿಕ್ ರೆಸ್ಸಿಸ್ಟೆನ್ಸ್ ಕೌನ್ಸಿಲ್ ಹೊತ್ತುಕೊಂಡಿದೆ.
ಮಂಗಳೂರಿನ ಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್ ಆಗಿತ್ತು. ಆದರೆ ಅದು ಜೆಸ್ಟ್ ಮಿಸ್ ಆಗಿದೆ ಎಂದು ಅರೆಬಿಕ್ ಭಾಷೆಯಲ್ಲಿ ಬರೆದಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಉಗ್ರ ಸಂಘಟನೆ ತಿಳಿಸಿದೆ.
ನವೆಂಬರ್ 23 ರಂದು ಮಾಡಲಾದ ಪೋಸ್ಟ್ ನಲ್ಲಿ ಈ ವಿಚಾರ ತಿಳಿಸಿರುವ ಉಗ್ರ ಸಂಘಟನೆ, ಶಾರಿಖ್ ನ ಎರಡು ಹಳೆ ಫೋಟೋ ಹಾಕಿದೆ.
ಜೊತೆಗೆ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿದೆ. ನಿಮ್ಮ ಸಂತೋಷ ಅಲ್ಪಕಾಲಿಕ, ನಿಮ್ಮ ದಬ್ಬಾಳಿಕೆಯ ಫಲವನ್ನು ಅನುಭವಿಸು ತ್ತೀರಾ. ನಮ್ಮ ಮೇಲೆ ಸಾರಿರುವ ಯುದ್ದಕ್ಕೆ ಪ್ರತಿಯಾಗಿ ದಾಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಕರಾವಣಿಯ ಮೇಲೆ ಶಾರಿಕ್ ಈ ಪರಿ ಕುದ್ದಿದ್ದು ಯಾಕೆ?, ಪಂಪ್ವೆಲ್ ಜತೆಗೆ ಸಿಕ್ಕಸಿಕ್ಕ ಕಡೆ ಬಾಂಬ್ ಇಡೋ ಸ್ಕೆಚ್?
ಶಾರಿಕ್ ಮನೆಹಾಳ್ ಕೆಲಸದ ಗುಟ್ಟು ಹೇಳಿದ ಮೊಬೈಲ್!ದೇಗುಲ ಮಾತ್ರವಲ್ಲ ..ಸಾರ್ವಜನಿಕ ಸ್ಥಳಗಳ ಟಾರ್ಗೆಟ್! ಇದರ ಡಿಟೈಲ್ಸ್ ಇಲ್ಲಿದೆ.
ಟಾರ್ಗೆಟ್ ನಂ.1
ಮಂಗಳೂರಿನಲ್ಲಿರುವ ರೈಲ್ವೆ ನಿಲ್ದಾಣ.! ಮಂಗಳೂರು ನಗರದ ಪಡೀಲು ಬಳಿಯ ರೈಲ್ವೆ ನಿಲ್ದಾಣ!ಜನಸಂದಣಿ ಇರುವ ರೈಲ್ವೆ ನಿಲ್ದಾಣದಲ್ಲಿ ಬ್ಲಾಸ್ಟ್ಗೆ ಸ್ಕೆಚ್
ಟಾರ್ಗೆಟ್ ನಂ.2
ಮಂಗಳೂರು ಕೆಎಸ್ಆರ್ಟಿಸಿ ನಿಲ್ದಾಣ?
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲೂ ಸ್ಫೋಟಕ್ಕೆ ಹುನ್ನಾರ?
ಟಾರ್ಗೆಟ್ ನಂ.3
ಮಂಗಳೂರು
ನಗರದ ಮಣ್ಣಗುಡ್ಡ ಏರಿಯಾದಲ್ಲಿರುವ ಸಂಘನಿಕೇತನ. ಬ್ಲಾಸ್ಟ್ ಆದ ದಿನ ಸಂಘನಿಕೇತನ ಕಾರ್ಯಕ್ರಮವಿತ್ತು.
ಇನ್ನು ಈ ಉಗ್ರ ಸಂಘಟನೆ ಬಗ್ಗೆ ಮಾಹಿತಿ ತಿಳಿಯಲು ರಾಜ್ಯ ಪೋಲಿಸರು ಕೇಂದ್ರ ಗೃಹ ಇಲಾಖೆಯ ಸಹಾಯ ಕೇಳಿದೆ
Comments