ಅವರಿಬ್ಬರು ಅಕ್ಕಪಕ್ಕದ ಊರಿನವರು ಜೊತೆಗೆ ಸ್ನೇಹಿತರು ಅ ಒಂದು ಹುಡುಗಿ ವಿಚಾರದ ಕಿರಿಕ್ ಇವತ್ತು ಎರಡು ಜೀವಗಳ ಬಲಿ ಪಡೆದುಕೊಂಡಿದೆ ..ಏಳು ವರ್ಷಗಳ ಹಿಂದೆ ಅಣ್ಣ ನನ್ನ ಕೊಂದ ಆರೋಪಿಯನ್ನು ಇಂದು ತಮ್ಮ ಸೇಡು ತೀರಿಸಿಕೊಂಡಿದ್ದಾನೆ.. ಮರಕಾಸ್ತ್ರಗಳಿಂದ ಕೊಚ್ಚಿ ಅಣ್ಣನ ಸೇಡನ್ನು ತೀರಿಸಿಕೊಂಡು ರಣಕೆಕೆ ಹಾಕಿದ್ದಾನೆ.. ಅಷ್ಟಕ್ಕೂ ಏನಿದು ರಿವೆಂಜ್ ಸ್ಟೋರಿ ಅಂತಿರಾ..
ಏಳು ವರ್ಷದ ಹಿಂದೆ ಅಣ್ಣನನ್ನು ಕೊಂದ ಆರೋಪಿಯನ್ನು ತಮ್ಮ ಕೊಂದು ಮಟಾಶ್..!!
ಮಾರಕಸ್ತ್ರಗಳಿಂದ ನಡು ರಸ್ತೆಯಲ್ಲಿ ಕೊಚ್ಚಿ ಕೊಲೆ..!!
ಕೊಲೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆ..!!
ಏಳು ಜನ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು..!!
ಅರ್ಜುನ್ ಭಾಸ್ಕರ್ ಅಲಿಯಾಸ್ ಸಾಗರ್ ಮಹೇಶ್ ಮುರುಗೇಶ್ ಹೇಮಂತ್ ಸಂದೀಪ್ ಪುನೀತ್ ಬಂದಿತ ಅರೋಪಿಪಿಗಳು… ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಗ್ರಾಮದ ಇಂದಿರಾನಗರ ಮುಖ್ಯ ರಸ್ತೆಯಲ್ಲಿ ಫೆಬ್ರವರಿ 25 ನೇ ತಾರೀಖಿನಂದು ಅಂದರೆ ಭಾನುವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಪದ್ಮರಾಜು ಮಗನದ ವಿಜಯಕುಮಾರನ್ನ ನಡು ರಸ್ತೆಯಲ್ಲಿ ಸಂಚುರೂಪಿಸಿ ಮಾರಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ರು. ಕೊಚ್ಚಿ ರಣಕೇಕ ಹಾಕಿದ್ರು ಈ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಪ್ರಕರಣದಾಗಿಸಿಕೊಂಡಿದ್ದ ಪೊಲೀಸರು ಚಾಡು ಹಿಡಿದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಇನ್ನು ಕೊಲೆ ಮಾಡುವ ಮುಂಚೆ ಅರೋಪಿ ಗಳು ಬ್ಯಾಗಡಿದನಹಳ್ಳಿ ಓಎಂ ಆರ್ ಬಾರೊಂದರಲ್ಲಿ ಮಧ್ಯಹ್ನ ಮೂರು ಗಂಟೆಯಲ್ಲಿ ಕಂಠಪೂರ್ತಿ ಕುಡಿದು ಸಂಜೆ ಚಂದಾಪುರದ ಆರ್ಕೆ ಬಾರನಲ್ಲಿ ಎಣ್ಣೆ ಹೊಡೆದು ಬಾರ್ ನಲ್ಲಿ ಸ್ಕೆಚ್ ಹಾಕಿದ್ರು ಬಳಿಕ ಮಧ್ಯರಾತ್ರಿ ಕೊಲೆ ಮಾಡಲು ಸಂಚುರೂಪಿಸಿದ್ರು.. ಅದರಂತೆ ರಾಜಾಪುರ ಮಹೇಶ ಮತ್ತು ಬೊಮ್ಮಸಂದ್ರ ಪುನೀತ ಇಬ್ಬರು ವಿಜಯ ಮನೆ ಹತ್ರ ಹೋಗಿ ಬಾಗಿಲು ಹೊಡೆದು ಅಣ್ಣ ಒಂದು ಡೀಲ್ ಬಂದಿದೆ ತುಂಬಾ ಕಷ್ಟದಲ್ಲಿದ್ದೇನೆ ಆಚೆ ಬಾ ಅಂತಲ್ಲ ಕರೆದ್ರಂತೆ .. ಅಷ್ಟೊತ್ತಿಗೆ ಅರ್ಜುನ್ ಅಂಡ್ ಗ್ಯಾಂಗ್ ಆಟೋದಲ್ಲಿ ಮತ್ತು ಬೈಕನಲ್ಲಿ ಯಲ್ಲಿ ಹೊಂಚು ಹಾಕಿ ರಸ್ತೆಯಲ್ಲಿ ಕೂತಿದ್ರು ವಿಜಯ್ ಮನೆಯಿಂದ ಆಚೆ ಬಂದಂತೆ ಜೊತೆಯಲ್ಲಿ ನಾಯಿ ಇತ್ತು ಅಂತೆ ಮನೆಯಿಂದ ಬರುವಾಗ ಕಾರಿನ ಮರೆಯಲ್ಲಿ ಅರ್ಜನ್ ,ಸಾಗರ್ ಮತ್ತು ರಸ್ತೆಯಲ್ಲಿ ಅಟೋದಲ್ಲಿ ಮುರುಗೇಶ್ ಸಂದೀಪ್ ಹೇಮಂತ್ ಕುತ್ತಿತರಂತೆ.. ವಿಜಯ್ ಕುಮಾರ್ ರಸ್ತೆಗೆ ಕರ್ಕೋಬರಷ್ಟರಲ್ಲಿ ಅರ್ಜುನ್ ಅಂಡ್ ಗ್ಯಾಂಗ್ ಮಾರಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಮಾಡಿದ್ದಾರೆ.. ಕೊಲೆ ಮಾಡಿದ ಬಳಿಕ ತಮಿಳ್ ನಾಡಿನ ರಾಯ್ಕೋಟೆ ಬೆಟ್ಟಕ್ಕೆ ಹೋಗಿ ಅಲ್ಲಿ ಸ್ನೇಹಿತನ ಬಳಿ ಹಣ ಪಡೆದು ಎರಡು ದಿನಗಳ ಕಾಲ ಹೊರಗಡೆ ಇದ್ರಂತೆ …
ಇನ್ನು ಕೊಲೆ ಮಾಡಲು ಪ್ರಮುಖವಾಗಿ ಅರ್ಜುನ್ ಅಣ್ಣ ಮನೋಜ್ ಅಲಿಯಾಸ್ ಬಬ್ಲಿ 2017ರಲ್ಲಿ ಯಶವಂತ್ ಮತ್ತು ಮನೋಜ್ ಗೆ ಹುಡುಗಿ ವಿಚಾರಕ್ಕೆ ಗಲಾಟೆ ನಡೆದಿತ್ತು .. ಇದೇ ವಿಚಾರವಾಗಿ ಆನೇಕಲ್ ಅವಡದೇನಹಳ್ಳಿ ರೈಲ್ವೆ ಬಿಡ್ಜ ನಲ್ಲಿ ಯಶ್ವಂತ್ನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಮನೋಜ್ ಈ ವಿಚಾರ ಸಂಬಂಧ ಆನೇಕಲ್ ಪೋಲೀಸರು ಮನೋಜನನ್ನು ಬಂಧಿಸಿ ಜೈಲಿಗೆ ಕಳಿಸಿದ್ರು ಬೇಲ್ ಮೇಲೆ ಬಂದು ಯಶವಂತನ ಮುಗಿಸಲು ಮನೋಜ್ ಸಂಚುರೂಪಿಸಿದ್ದ .. ಈ ವಿಚಾರ ಯಶವಂತ್ ಗೊತ್ತಾಗಿ ಯಶ್ವಂತ್ ಸ್ನೇಹಿತ ವಿಜಯ್ ಕುಮಾರ್ ಕೆರೆ ಯಲ್ಲಿ ಎಣ್ಣೆ ಪಾರ್ಟಿ ಮಾಡುವಾಗ ಮನೋಜನನನ್ನ ಚಾಕು ಇರಿದು ಯಶವಂತ ವಿಜಯಕುಮಾರ್ ಕೊಲೆ ಮಾಡಿದ್ರು ಅತ್ತಿಬೆಲೆ ಪೊಲೀಸರು ಕೊಲೆ ಅರೋಪದ ಮೇಲೆ ಬಂಧಿಸಿ ಕೇಂದ್ರ ಕಾರಾಗೃಹಕ್ಕೆ ಬಿಡಲಾಗಿತ್ತು ..ಇನ್ನು ವಿಜಯ್ ಏಳು ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದ ಇತ್ತೀಚಿಗೆ ಎಂಟು ತಿಂಗಳ ಹಿಂದೆ ಬೇಲ್ ಮೇಲೆ ಹೊರಗಡೆ ಬಂದಿದ್ದ ವಿಜಯಕುಮಾರ್ ನನ್ನು ಕೊಂದು ಮುಗಿಸಲು ತಮ್ಮ ಅರ್ಜನ ಅಂಡ್ ಗ್ಯಾಂಗ್ ಜನವರಿ 15ನೇ ತಾರೀಖಿನಂದು ಮರಸೂರು ಗ್ರಾಮದ ಪಲ್ಲಕ್ಕಿ ಉತ್ಸವದಲ್ಲಿ ಸಹ ಅಟ್ಯಾಕ್ ಮಾಡಿದ್ದ.. ವಿಜಯ್ ಕುಮಾರ್ ಅಲ್ಲಿಂದ ಪಾರಾಗಿದ್ದ.. ಪೊಲೀಸ್ ತನಿಖೆ ಯಲ್ಲಿ ಅಣ್ಣನ ಕೊಂದಿದ್ದಕ್ಕೆ ಸೇಡು ತೀರಿಸಿಕೊಂಡಿದ್ದೇನೆ ಅಂತ ತಪ್ಪು ಒಪ್ಪಿಕೊಂಡಿದ್ದಾರೆ…
ಸದ್ಯ ಆರೋಪಿಗಳನ್ನು ಸೂರ್ಯ ನಗರ ಪೊಲೀಸ್ರು ಬಂಧಿಸಿ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.. ತನಿಕೆಯಲ್ಲಿ ಇನ್ನಷ್ಟು ಮಾಹಿತಿ ಹೊರಬೀಳಲಿದೆ.. ಒಟ್ನಲ್ಲಿ ಏಳು ವರ್ಷದ ನಂತರ ಅಣ್ಣನ ಸೇಡನ್ನು ತಮ್ಮ ತೀರಿಸಿಕೊಂಡು ಈಗ ಜೈಲು ಪಾಲಾಗಿದ್ದಾನೆ.. ಅವನನ್ನು ನಂಬಿಕೊಂಡು ಬಂದಿದ್ದ ಹುಡುಗರು ಸಹ ಜೈಲು ಪಾಲಾಗಿದ್ದಾರೆ ತಮ್ಮ ಭವಿಷ್ಯಗಳನ್ನ ಹಾಳು ಕೊಂಡಿರುವುದು ಮಾತ್ರ ವಿಪರ್ಯಾಸ..
Comments