ತುಮಕೂರು-ನಾಗಾಸಾಧುಗಳ ಸೋಗಿನಲ್ಲಿ, ಫಿಲ್ಮಿ ಸ್ಟೈಲ್ ನಲ್ಲಿ ನಡೀತು ಕಳ್ಳತನ. ಕಮಂಡಲ ಹಿಡಿದ, ಕಾವಿಧಾರಿಗಳಿಂದ ನಡೆಯಿತು ಕಳ್ಳತನ
ಕೈಯಲ್ಲಿ ರುದ್ರಾಕ್ಷಿ ಕೊಟ್ಟು ಧ್ಯಾನ ಮಾಡುವಂತೆ ಹೇಳಿ, ಭಕ್ತನ ಉಂಗುರ ಕದ್ದು ಓಡಿ ಹೋದ ನಕಲಿ ನಾಗಾ ಸಾಧುಗಳು. ತುಮಕೂರು ನಗರದ ಎಂ.ಜಿ ರಸ್ತೆಯಲ್ಲಿ ಘಟನೆ. ಎಂ.ಜಿ ರಸ್ತೆಯ ಮಲ್ನಾಡ್ ಸ್ಟುಡಿಯೋ ಮಾಲೀಕನಿಗೆ ಮಂಕುಬೂದಿ ಎರಚಿ ಕಳ್ಳತನ.
ಮಾಲೀಕ ಚಂದ್ರುವಿನ ಕೈಯಲ್ಲಿ ರುದ್ರಾಕ್ಷಿ ಇಟ್ಟು ಎರಡೂ ಕೈಯನ್ನು ಬಲವಾಗಿ ಹಿಡಿದು ಮಂತ್ರ ಹೇಳಿದ ವೇಷಧಾರಿಗಳು. ಮಂತ್ರ ಹೇಳಿಸುವ ನೆಪದಲ್ಲಿ ಬೆರಳಲ್ಲಿದ್ದ ಉಂಗುರ ಲಪಟಾಯಿಸಿದ ಇಬ್ಬರು ನಕಲಿ ನಾಗಾಗಳು. ಎರಡು ನಿಮಿಷ ಧ್ಯಾನ ಮಾಡಿ ಎಂದು ಹೇಳಿ ನಿಧಾನ ಕಾಲ್ಕಿತ್ತ ಸ್ವಾಮೀಜಿಗಳು.
ಧ್ಯಾನದಿಂದ ಹೊರಬಂದು ನೋಡಿದಾಗ ಬಲಗೈಯ ಉಂಗುರ ಕದ್ದದ್ದು ದೃಢ. ಕದ್ದ ರಿಂಗ್ ನೊಂದಿಗೆ ನಾಗಾಸಾಧು ಆಟೋ ಹತ್ತಿ ಪರಾರಿ. ಒಟ್ಟು ಇಬ್ಬರು ನಕಲಿ ಸ್ವಾಮೀಜಿಗಳಿಂದ ಕೃತ್ಯ.
ಈ ಸಂಬಂಧ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು.
Comments