ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪೂರ್ ಶರ್ಮಾ ಅವರನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದ ವ್ಯಕ್ತಿಯ ಶಿರಶ್ಚೇದನ ಮಾಡಿ ಪೈಶಾಚಿಕ ಕೃತ್ಯ ಎಸಗಲಾಗಿದೆ.
ರಾಜಸ್ಥಾನದ ಉದಯಪುರದ ಮಲ್ಥಾಸ್ ಬೀದಿಯ ಕನ್ಹಯ್ಯ ಲಾಲ್ ಸಾಹು ಎಂಬಾತ ಬಟ್ಟೆ ಅಂಗಡಿ ನಡೆಸುತ್ತಿದ್ದನು.
ನೂಪೂರ್ ಶರ್ಮಾ ಅವರ ವಿರುದ್ಧ ಒಂದೆಡೆ ದೇಶದಲ್ಲಿ ಉಗ್ರ ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದಡೆ ಕನ್ಹಯ್ಯಾ ಲಾಲ್ ಸಾಹು ನೂಪೂರ್ ಶರ್ಮಾ ಅವರನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದನು.
ಇದು ಸಹಜವಾಗಿ ಮುಸ್ಲಿಂ ಸಮುದಾಯದವರನ್ನು ಕೇರಳಿಸಿತ್ತು. ಹೀಗೆ ಮಾಡದಂತೆ ವಾರ್ನಿಂಗ್ ಕೊಟ್ಟರೂ ಆತ ಕೇಳುತ್ತಿರಲಿಲ್ಲ.
ಇಂದು ಬಟ್ಟೆ ಹೊಲಿಸಿಕೊಳ್ಳುವ ನೆಪದಲ್ಲಿ ಬಂದ ಇಬ್ಬರು ಬಟ್ಟೆ
ಅಳತೆ ತೆಗೆದುಕೊಳ್ಳುವ ವೇಳೆ ಕನ್ಹಯ್ಯಾ ಲಾಲ್ ಸಾಹು ಶಿರಶ್ಚೇದನ ಮಾಡಿ ಎಸ್ಕೇಪ್ ಆಗಿದ್ದಾರೆ.
ಗೌಸ್ ಮೊಹಮ್ಮದ್ ಮತ್ತು ಮೊಹಮ್ಮದ್ ರಿಯಾಜ್ ಎಂದು ಆರೋಪಿಗಳೆಂದು ಗುರುತಿಸಲಾಗಿದೆ.
ಈ ಘಟನೆಯಿಂದ ಉದಯಪುರದಲ್ಲಿ ಪ್ರತಿಭಟನೆ ಆರಂಭವಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
Comments