Karnataka

ಮಂಡ್ಯದ ಶ್ರೀರಂಗಪಟ್ಟಣದ ಉರುಸ್ ವೇಳೆ ತಪ್ಪಿದ ಬಾರೀ ದುರಂತ- ಸ್ಥಳಿಯರ ಸಮಯ ಪ್ರಜ್ಞೆಯಿಂದ ತಪ್ಪಿತು ಅನಾಹುತ

0

ಮಂಡ್ಯ (ಶ್ರೀರಂಗಪಟ್ಟಣ)- ಶ್ರೀರಂಗಪಟ್ಟಣದಲ್ಲಿ ಇಂದಿನಿಂದ ಆರಂಭವಾಗಿರುವ 230 ನೇ ಉರುಸ್ ಆಚರಣೆಯ ಮೊದಲ ದಿನವಾದ ಇಂದು ಬಾರೀ ದುರಂತ ತಪ್ಪಿದೆ.

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಿಂದ ಗಂಜಾಂ ಸರ್ಕಲ್ ತನಕ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಮೆರವಣಿಗೆ ಪಕ್ಕದಲ್ಲೆ ಸಾಗುತ್ತಿದ್ದ ಸಿಮೆಂಟ್ ಮಿಕ್ಸಿಂಗ್ ಲಾರಿಗೆ ವಿದ್ಯುತ್ ತಂತಿ ಸ್ಪರ್ಶವಾಯಿತು.

ಲಾರಿ ಚಾಲಕನ ಎಡವಟ್ಟಿನಿಂದ ಹೀಗಾಯಿತು. ಇದು ತಿಳಿಯುತ್ತಿದ್ದಂತೆ ಚಾಲಕ ಲಾರಿಯಿಂದ ನೆಗೆದನು.
ಸಂಭವಿಸಬಹುದಾದ ಅನಾಹುತದ ಗಮನಿಸಿದ ನೂರಾರು ಜನರು ಆ ಲಾರಿಯಿಂದ ದೂರವಾದರು.

ತರುವಾಯ ಮರದ ಕೋಲಿನಿಂದ ವಿದ್ಯುತ್ ತಂತಿಯನ್ನು ಪಕ್ಕಕ್ಕೆ ಸರಿಸಿದರು. ತರುವಾಯ ಸಿಮೆಂಟ್ ಮಿಕ್ಸಿಂಗ್ ಲಾರಿ ಅಲ್ಲಿಂದ ಕದಲಿತು.

siteadmin

ಶ್ರೀರಂಗಪಟ್ಟಣದ ಉರುಸ್ ಆಚರಣೆ ವೇಳೆ ತಪ್ಪಿದ ಬಾರೀ ದುರಂತ- ಸ್ಥಳಿಯರ ಸಮಯ ಪ್ರಜ್ಞೆಯಿಂದ ಅನಾಹುತದಿಂದ ಬಚಾವ್

Previous article

ವಿರಾಟ್ ಕೊಹ್ಲಿಗೆ ಲವ್ ಪ್ರಪೋಸ್- ಜೂನಿಯರ್ ತೆಂಡೋಲ್ಕರ್ ಜೊತೆ ಡೇಟಿಂಗ್- ಈಕೆಯ ‘ಲವ್ ಕಹಾನಿ’ ಇದು

Next article

You may also like

Comments

Comments are closed.

More in Karnataka