ಮಂಡ್ಯ (ಶ್ರೀರಂಗಪಟ್ಟಣ)- ಶ್ರೀರಂಗಪಟ್ಟಣದಲ್ಲಿ ಇಂದಿನಿಂದ ಆರಂಭವಾಗಿರುವ 230 ನೇ ಉರುಸ್ ಆಚರಣೆಯ ಮೊದಲ ದಿನವಾದ ಇಂದು ಬಾರೀ ದುರಂತ ತಪ್ಪಿದೆ.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಿಂದ ಗಂಜಾಂ ಸರ್ಕಲ್ ತನಕ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಮೆರವಣಿಗೆ ಪಕ್ಕದಲ್ಲೆ ಸಾಗುತ್ತಿದ್ದ ಸಿಮೆಂಟ್ ಮಿಕ್ಸಿಂಗ್ ಲಾರಿಗೆ ವಿದ್ಯುತ್ ತಂತಿ ಸ್ಪರ್ಶವಾಯಿತು.
ಲಾರಿ ಚಾಲಕನ ಎಡವಟ್ಟಿನಿಂದ ಹೀಗಾಯಿತು. ಇದು ತಿಳಿಯುತ್ತಿದ್ದಂತೆ ಚಾಲಕ ಲಾರಿಯಿಂದ ನೆಗೆದನು.
ಸಂಭವಿಸಬಹುದಾದ ಅನಾಹುತದ ಗಮನಿಸಿದ ನೂರಾರು ಜನರು ಆ ಲಾರಿಯಿಂದ ದೂರವಾದರು.
ತರುವಾಯ ಮರದ ಕೋಲಿನಿಂದ ವಿದ್ಯುತ್ ತಂತಿಯನ್ನು ಪಕ್ಕಕ್ಕೆ ಸರಿಸಿದರು. ತರುವಾಯ ಸಿಮೆಂಟ್ ಮಿಕ್ಸಿಂಗ್ ಲಾರಿ ಅಲ್ಲಿಂದ ಕದಲಿತು.
Comments