Crime Alert

ಮಸೀದಿ ಮುಂದೆ ಕೇಸರಿ ಧ್ವಜ ಕಟ್ಟಿದ ವಿಚಾರ- ಇಬ್ಬರ ನಡುವೆ ಮಾರಾಮಾರಿ- ಆಸ್ಪತ್ರೆಗೆ ದಾಖಲು

0

ಚಿಕ್ಕಮಗಳೂರು- ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ನಗರದಲ್ಲಿರುವ ಮಸೀದಿ ಮುಂದೆ ಕೆಸರಿ ಧ್ವಜ ಕಟ್ಟಿದ ವಿಚಾರಕ್ಕೆ ಮಾರಾಮಾರಿ ನಡೆದಿರುವ ಘಟನೆ ನಡೆದಿದೆ.

ಕಾಂಗ್ರೆಸ್ ಪಕ್ಷದ ಪಟ್ಟಣ ಪಂಚಾಯಿತಿ ಸದಸ್ಯ ರಫೀಕ್ ಮತ್ತು ಶ್ರೀ ರಾಮಸೇನೆ ಕಾರ್ಯಕರ್ತರ ನಡುವೆ ಬಡಿದಾಟವಾಗಿದೆ.

ಶ್ರೀ ರಾಮ ಸೇನೆಯ ದತ್ತಮಾಲಾ ಅಭಿಯಾನ ಹಿನ್ನೆಲೆ ಶೃಂಗೇರಿ ನಗರದಲ್ಲಿ ಹಿಂದೂ ಕಾರ್ಯಕರ್ತರು ಧ್ವಜ ಕಟ್ಟಿದ್ದಾರೆ. ಮಸೀದಿ ಮುಂದೆ ಕೆಸರಿ ಧ್ವಜ ಕಟ್ಟಿದ್ದಕ್ಕೆ ರಫೀಕ್ ಪ್ರಶ್ನೆ ಮಾಡಿದ್ದಾನೆ. ಮಸೀದಿ ಮುಂದೆ ಕಟ್ಟಿದ್ದ ಧ್ವಜ ತೆರವು ಮಾಡಿದ ರಫೀಕ್ ಮೇಲೆ ಶ್ರೀ ರಾಮಸೇನೆ ಕಾರ್ಯಕರ್ತರು ಹಲ್ಲೆ ಮಾಡಿದ್ದಾನೆ. 

ಈ ವಿಚಾರಕ್ಕೆ ಇಬ್ಬರ ನಡುವೆ ಮಾರಾಮಾರಿ ನಡೆದು ತೀವ್ರವಾಗಿ ಗಾಯಗೊಂಡ ರಫೀಕ್  ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತ ಅರ್ಜುನ್ ಅಸ್ಪತ್ರೆಗೆ ದಾಖಲು ಮಾಡಲಾಗಿದೆ

ಶೃಂಗೇರಿ ಪೊಲೀಸ್ ಠಾಣೆಯಲ್ಲಿ ರಫೀಕ್ ಅರ್ಜುನ್ ಮೇಲೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ‌ ಎರಡು ಸಮುದಾಯದವರ ನಡುವೆ ಶಾಂತಿ ಸಭೆ‌ ನಡೆದಿದೆ.

ಕೋಮು ಪ್ರಚೋದನೆ ಮಾಡದಂತೆ ಪೊಲೀಸ್ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ. ಶೃಂಗೇರಿಯಲ್ಲಿ ಪೋಲಿಸ್ ಬಿಗಿ ಭದ್ರತೆ.

siteadmin

ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿ ಬಿದ್ದ ವಿದ್ಯಾರ್ಥಿ- ಬೆಂಗಳೂರಿನಲ್ಲಿ ಮನನೊಂದು ಆತ್ಮಹತ್ಯೆಗೆ ಶರಣು

Previous article

ಮೈಸೂರಿನ ಗಿರವಿ ಅಂಗಡಿ ಮಾಲೀಕನಿಂದ ಕೋಟ್ಯಾಂತರ ರೂಪಾಯಿ “ಪಂಗನಾಮ”- ರಾತ್ರೊರಾತ್ರಿ ಮೈಸೂರು ಬಿಟ್ಟು ಎಸ್ಕೇಪ್

Next article

You may also like

Comments

Leave a reply

Your email address will not be published. Required fields are marked *

More in Crime Alert