ಚಿಕ್ಕಮಗಳೂರು- ಕಾಂಗ್ರೆಸ್ ಶಾಸಕನ ವಿರುದ್ಧ ಮಹಿಳಾ ಪೊಲೀಸ್ ಪೇದೆ ಮೇಲೆ ದೌರ್ಜನ್ಯದ ಆರೋಪ, ಸತ್ಯ ಬಿಚ್ಚಿಟ್ಟಿ ಪೋಲಿಸ್ ಪೇದೆಗೆ ಸಂಕಷ್ಟ.
ಮಹಿಳಾ ಪೊಲೀಸ್ ಪೇದೆಯಿಂದ ಶಾಸಕನ ವಿರುದ್ಧ ಧಿಕ್ಕಾರ ಎಂದು ಪೋಸ್ಟ್. ಕಾಂಗ್ರೆಸ್ ಶಾಸಕನ ವಿರುದ್ಧ ವಾಟ್ಸಪ್ ಸ್ಟೇಟಸ್ ಹಾಕಿ ಆಕ್ರೋಶ.
ನನಗೆ ಏನಾದರೂ ತೊಂದರೆಯಾದರೆ ಕಡೂರು ಶಾಸಕನೇ ಕಾರಣ. ಕಡೂರು MLA ಗೆ ನನ್ನ ಧಿಕ್ಕಾರ ಎಂದು ವಾಟ್ಸಪ್ ಸ್ಟೇಟಸ್ ಹಾಕಿದ ಮಹಿಳಾ ಪೇದೆ
ಕಾಂಗ್ರೆಸ್ ಶಾಸಕನ ವಿರುದ್ಧ ಸ್ಟೇಟಸ್ ಹಾಕಿದ್ದಕ್ಕೆ ಅಮಾನತು. ಕಡೂರು ಪೊಲೀಸ್ ಠಾಣೆಯ ಮಹಿಳಾ ಪೇದೆ ಲತಾ ಸಸ್ಪೆಂಡ್
ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಶಾಸಕ ಆನಂದ್ ವಿರುದ್ಧ ಪೋಸ್ಟ್. ಪೋಸ್ಟ್ ಹಾಕಿದ್ದಕ್ಕೆ ಅಮಾನತು ಮಾಡಿ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಆದೇಶ.
K.S ಆನಂದ್ ಕಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕ. ಚುನಾವಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಗೆ ಹೆಲ್ಮೆಟ್ ಹಾಕಿಲ್ಲ ಎಂದು ದಂಡ. ದಂಡ ಹಾಕಿದಕ್ಕೆ ಸ್ಥಳಕ್ಕೆ ಬಂದು ಆಕ್ರೋಶ ಹೊರಹಾಕಿದ್ದ ಆನಂದ್..
ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿರುವ ವಿಡಿಯೋ ವೈರಲ್. ಚುನಾವಣೆ ಮುಗಿದ ಬಳಿಕ ಕಡೂರು ಠಾಣೆಯಿಂದ ತರೀಕೆರೆ ಪೊಲೀಸ್ ಠಾಣೆಗೆ ಪೇದೆ ಲತಾ ವರ್ಗಾವಣೆ. ಹಳೆಯ ದ್ವೇಷಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಮಹಿಳಾ ಪೇದೆ ಲತಾ ಆಕ್ರೋಶ.
Comments