ಹಾಸನ- ಕೊರೊನಾ ಅಟ್ಟಹಾಸ ಮರೆಯುತ್ತಿರುವ ಕಾರಣ ಬೇಲೂರು- ಹಳೆಬೀಡು ಸೇರಿದಂತೆ ಹಾಸನ ಜಿಲ್ಲೆಯ ಎಲ್ಲಾ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ.
ಈ ಸಂಬಂಧ ಭಾರತೀಯ ಪುರಾತತ್ವ ಇಲಾಖೆ ಈ ಆದೇಶ ಹೊರಡಿಸಿ, ಮೇ 15 ರ ತನಕ ಇದು ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೆ ಚನ್ನಕೇಶವ ದೇಗುಲದಲ್ಲಿ ಗರುಡ ಪ್ರತಿಷ್ಠಾಪನೆ ಮಾಡಿ ಸಾಂಕೇತಿಕವಾಗಿ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಆದರೆ ದೇವಸ್ಥಾನ ಬಂದ್ ಆಗಿರುವ ವಿಚಾರ ತಿಳಿಯದೆ ದೇವಸ್ಥಾನಕ್ಕೆ ಬಂದ ಭಕ್ತರಿಗೆ ತೀವ್ರ ನಿರಾಸೆ ಆಯಿತು.
ಹಾಸನ ಜಿಲ್ಲೆಯ ಬೇಲೂರು, ಹಳೇಬೀಡು ಹಾಗೂ ವಿಶ್ವ ವಿಖ್ಯಾತ ಶ್ರವಣ ಬೊಳಗೊಳ ಸೇರಿದಂತೆ ಹಲವು ದೇವಸ್ಥಾಗಳು ಇನ್ನು 15 ದಿನಗಳ ಕಾಲ ಮುಚ್ಚಿರುತ್ತವೆ.
Comments