Crime AlertKarnataka

ಕೊನೆಯ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ- ನಾಳೆಯಿಂದ ನನ್ನ ಅಸಲಿ ಆಟ ತೋರಿಸುತ್ತೇನೆ- ‘ಮಹಾನ್ ನಾಯಕ’ ಯಾರು ಅಂತ ಗೊತ್ತಾಗುತ್ತೆ- ಸಾಹುಕಾರ್

0

ಬೆಂಗಳೂರು- “ನನ್ನ ವೈರಿಗಳು ಕೊನೆಯ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ. ನನ್ನ ಅಸಲಿ ಆಟ ನಾಳೆಯಿಂದ ಶುರುವಾಗುತ್ತದೆ. ಆ ಮಹಾನ್ ನಾಯಕನ ಷಡ್ಯಂತ್ರ ಕೂಡ ಶೀಘ್ರದಲ್ಲೇ ಬಹಿರಂಗವಾಗುತ್ತದೆ.”
ಸಿಡಿ ಲೇಡಿಯ ಕಂಪ್ಲೆಂಟ್ ಗೆ ವಿರುದ್ಧವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯ ಬುಲೆಟ್ ಪಾಯಿಂಟ್ ಗಳಿವು.
ಸಿಡಿ ಲೇಡಿ ವಕೀಲರ ಮೂಲಕ ಪೊಲೀಸರಿಗೆ ದೂರು ನೀಡಿದ ತರುವಾಯ ರಮೇಶ್ ಜಾರಕಿಹೊಳಿ ಸುಮಾರು ಎರಡು ಗಂಟೆಗಳ ಕಾಲ ತಮ್ಮ ವಕೀಲರ ಜೊತೆ ಮಾತುಕತೆ ನಡೆಸಿದರು. ಇದೇ ವೇಳೆ ಸಹೋದರ ಬಾಲಚಂದ್ರ ಜಾರಕಿಹೊಳಿ ಕೂಡ ಭೇಟಿ ಮಾಡಿ ರಮೇಶ್ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿದ್ರು.
ತರುವಾಯ ಮಾಧ್ಯಮದವರ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ, “ಅವರ ಕೊನೆಯ ಬ್ರಹ್ಮಾಸ್ತ್ರ ಇವತ್ತು ಬಿಟ್ಟಿದ್ದಾರೆ. ಆದರೆ ನಾನು ಇದಕ್ಕೆಲ್ಲಾ ಹೆದರುವುದಿಲ್ಲ. ನಾಳೆಯಿಂದ ನನ್ನ ಅಸಲಿ ಆಟ ಏನೆಂದು ತೋರಿಸುತ್ತೇನೆ. ಇದಕ್ಕೆಲ್ಲಾ ಕಾರಣನಾಗಿರುವ ಆ ಮಹಾನ್ ನಾಯಕ ಷಡ್ಯಂತ್ರ ಏನೆಂದು ಶೀಘ್ರದಲ್ಲೇ ಗೊತ್ತಾಗಲಿದೆ” ಎಂದು ರಮೇಶ್ ಜಾರಕಿಹೊಳಿ ಒಂದಾದ ಮೇಲೆ ಒಂದು ಬುಲೆಟ್ ನಂತೆ ನುಡಿ ಉದುರಿಸಿದರು.

ನಾನು ಬೆಂಗಳೂರು ಬಿಟ್ಟು ಎಲ್ಲೂ ಹೋಗುವುದಿಲ್ಲ. ಇದನ್ನು ಪೊಲೀಸ್ ಕಮಿಷನರ್ ಅವರಿಗೆ ಸ್ಪಷ್ಟಪಡಿಸುತ್ತೇನೆ ಎಂದು ಸಾಹುಕಾರ್ ಹೇಳಿದರು. 

ಈಗ ಯುವತಿ ನೀಡಿರುವ ದೂರಿನ ಮೇರೆಗೆ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಾದ್ರೆ, ಅವರು ಬಂಧನಕ್ಕೊಳಗಾಗುತ್ತಾರಾ. ಒಂದು ವೇಳೆ ಬಂಧನವಾದ್ರೆ, ಮುಂದಿನ ಬೆಳವಣಿಗೆಗಳೇನು ಎಂಬ ವಿಚಾರಗಳು ಬಹು ರೋಚಕವಾಗಿದೆ. 

siteadmin

ಕೊನೆಗೂ ಪೊಲೀಸ್ ಗೆ ಕಂಪ್ಲೆಂಟ್ ಕೊಟ್ಟ ‘ಸಿಡಿ ಲೇಡಿ’- ಅಶ್ಲೀಲ CD ಬಿಡುಗಡೆ ಮಾಡಿದ್ದು ಜಾರಕಿಹೊಳಿ- ದೂರಿನ ವಿವರ ಹೀಗಿದೆ

Previous article

ಮೋಸಂಬಿ ಹಣ್ಣಿನ ಸಿಪ್ಪೆ ಮೊಡವೆಗೆ ರಾಮಬಾಣ- ಮೋಸಂಬಿ ಹಣ್ಣಿನ ಬಹುಪಯೋಗದ ಬಗ್ಗೆ ಇಲ್ಲಿದೆ ಮಾಹಿತಿ

Next article

You may also like

Comments

Leave a reply

Your email address will not be published. Required fields are marked *

More in Crime Alert