ಮೈಸೂರು- ನಮ್ಮ ರೈತರ ಹಿತರಕ್ಷಣೆಗೆ ಬದ್ದ ಎಂದು ಹೇಳುತ್ತಿರುವ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ 3500 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುತ್ತಿದೆ.
ಮಂಡ್ಯದ ಕೆಆರ್ ಎಸ್ ಜಲಾಶಯದಲ್ಲಿ ಈಗ 12 ಟಿಎಂಸಿ ನೀರು ಇದೆ. ಡೆಡ್ ಸ್ಟೋರೇಜ್ ಕಳೆದರೆ 8 ಟಿಎಂಸಿ ನೀರು ಸಿಗುತ್ತದೆ. ಇನ್ನು ಮೈಸೂರಿನ ಕಬಿನಿ ಜಲಾಶಯದಲ್ಲಿ 6 ಟಿಎಂಸಿ ನೀರು ಇದೆ. ಇದರಲ್ಲಿ ಡೆಡ್ ಸ್ಟೋರೇಜ್ 2 ಟಿಎಂಸಿ ಬಿಟ್ಟರೆ 4 ಟಿಎಂಸಿ ನೀರು ಸಿಗುತ್ತದೆ.
ಇದರಿಂದ ಈಗಿರುವ ನೀರು ಕುಡಿಯಲು ಸಾಕಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಲೆ ಇದೆ.
ನಮ್ಮ ಜಲಾಶಯದಲ್ಲೆ ನೀರಿಲ್ಲ. ಈ ಕಾರಣ ತಮಿಳುನಾಡಿಗೆ ನೀರು ಬಿಡಲ್ಲ. ನಮ್ಮ ರೈತರ ಹಿತ ಕಾಪಾಡುತ್ತೇವೆ ಎಂದು ಹೇಳುವ ಸರ್ಕಾರ ನಿರಂತರವಾಗಿ ನೀರು ಹರಿಸುತ್ತಲೆ ಇದೆ.
Comments