Crime Alert

ನಂಜನಗೂಡಿನಲ್ಲಿ ಸೈಲೆಂಟ್ ಆದ ಪೊಲೀಸರು- ಅಲರ್ಟ್ ಆದ ಖದೀಮರು

0

 

ನಂಜನಗೂಡು- ಖತರ್ನಾಕ್ ಕಳ್ಳರು ಕೈಚಳಕ ತೋರಿ ಹಣ ಒಡವೆ ದ್ವಿಚಕ್ರ ವಾಹನಗಳನ್ನು ಕದ್ದಿರುವ ಪ್ರಕರಣಗಳನ್ನು ನಾವು ನೋಡಿದ್ದೇವೆ ಕೇಳಿದ್ದೇವೆ ಆದರೆ ನಂಜನಗೂಡು ಪಟ್ಟಣದ ಗೌತಮ ಬಡಾವಣೆಯಲ್ಲಿ ವಿಶೇಷ ಮತ್ತು ವಿಭಿನ್ನ ರೀತಿಯಲ್ಲಿ ಕಳ್ಳತನ ಪ್ರಕರಣ ನಡೆದಿದೆ ಅದೇನು ಅಂತೀರಾ…!

ಈ ಸುದ್ದಿ ನೋಡಿ ಹೆಚ್ಚು ಹೆಚ್ಚು ಹಣ ಸಿಗಬಹುದು ಎಂಬ ದುರಾಸೆಯಿಂದ ಪ್ರಾವಿಜನ್ ಸ್ಟೋರ್ ಬೀಗ ಮರಿದು ಬಾಗಿಲು ಮೀಟಿ ಸುಮಾರು ಒಂದುವರೆ ಲಕ್ಷ ರೂಗಳ ಬೆಲೆಬಾಳುವ ದವಸ ಧಾನ್ಯಗಳು ಸೇರಿದಂತೆ ಅಂಗಡಿಯಲ್ಲಿದ್ದ ಪದಾರ್ಥಗಳನ್ನೆ ಕದ್ದೋಯ್ದಿರುವ ಪ್ರಕರಣ ನಡೆದಿದೆ.

ಗೌತಮ ಬಡಾವಣೆಯಲ್ಲಿರುವ ಮಹದೇವ್ ಎಂಬುವರಿಗೆ ಸೇರಿದ ಶ್ರೀ ಭೋಗೇಶ್ವರ ಪ್ರಾವಿಜನ್ ಸ್ಟೋರ್ ಗೆ ಕನ್ನ ಹಾಕಿ ಸಾಕಷ್ಟು ಅವಾಂತರ ಮಾಡಿ ಕಳ್ಳರು ನಾಪತ್ತೆಯಾಗಿದ್ದಾರೆ ಈ ವಿಚಾರವಾಗಿ ಪ್ರಾವಿಷನ್ ಸ್ಟೋರ್ ಅಂಗಡಿಯ ಮಾಲೀಕ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲನೆ ಮಾಡಿ ಬೆರಳಚ್ಚು ತಜ್ಞರ ಮೂಲಕ ತಪಾಸಣೆ ನಡೆಸಿ ಕಳ್ಳರ ಕೈಗೆ ಬೇಡಿ ತೊಡಿಸಲು ಬಲೆ ಬೀಸಿದ್ದಾರೆ.

 

siteadmin

ದೇವಸ್ಥಾನದಲ್ಲಿ ನಟಿ ಖುಷ್ಬೂ ಪಾದ ತೊಳೆದು ವಿಶಿಷ್ಟ ಪೂಜೆ

Previous article

ಮೈಸೂರು ದಸರಾದಲ್ಲಿ ಈ ಬಾರಿ‌ ಇರುತ್ತೆ ಏರ್ ಶೋ

Next article

You may also like

Comments

Leave a reply

Your email address will not be published. Required fields are marked *

More in Crime Alert