ಸ್ಯಾಂಡಲ್ ವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಖುಷ್ಬೂ ಸುಂದರ್ ಗೆ ಪಾದ ಪೂಜೆ ಮಾಡಲಾಗಿದೆ.
ಕೇರಳದ ತಿಶ್ರೂರ್ ನ ವಿಷ್ಣುಮಾಯಾ ದೇವಸ್ಥಾನದಲ್ಲಿ ಖುಷ್ಬೂಗೆ ಪಾದ ಪೂಜೆ ಮಾಡಲಾಗಿದೆ.
ಪ್ರತಿವರ್ಷ ಸುಹಾಸಿನಿ ಪೂಜೆ ಹೆಸರಿನಲ್ಲಿ ಒಬ್ಬ ಮಹಿಳೆ ಪಾದ ಪೂಜೆ ಮಾಡುವುದು ಪ್ರತೀತಿ.
ಈ ಹಿನ್ನೆಲೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾದ ಖುಷ್ಬೂ ಅವರನ್ನು ಆಹ್ವಾನಿಸಿ ಈ ವರ್ಷ ಪೂಜೆ ಮಾಡಲಾಗಿದೆ.
ಖಷ್ಬೂ ಪಾದ ಪೂಜೆ ಮಾಡಿದ ನಂತರ ರೇಷ್ಮೆ ವಸ್ತ್ರ ನೀಡಿ, ಕೊರಳಿಗೆ ಹಾರ ಹಾಕಿ ಗೌರವಿಸಲಾಗಿದೆ.
Comments