ಬೆಂಗಳೂರು-ನವ ವಿವಾಹಿತರಿಬ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿಯಲ್ಲಿ ಸಂಭವಿಸಿದೆ.
ಬೆಂಗಳೂರಿನ ಹೆಬ್ಬಾಳದ ಜ್ಯೋತಿ ಹಾಗೂ ಯಶವಂತ್ ಆತ್ಮಹತ್ಯೆ ಮಾಡಿಕೊಂಡಿರುವರು.
ಮದುವೆಗೆ ಪೋಷಕರ ವಿರೋಧ ಇದ್ದ ಕಾರಣ ಇವರಿಬ್ಬರೂ ಮನೆಯವರಿಗೆ ತಿಳಿಸದೆ ಪ್ರೇಮ ವಿವಾಹವಾಗಿದ್ದರು.
ಕಳೆದ ಎರಡು ದಿನದ ಹಿಂದೆ ಇಬ್ಬರು ನಾಪತ್ತೆಯಾಗಿದ್ದರು. ಇಂಟರ್ ವ್ಯೂಗೆ ಹೋಗಿ ಬರುತ್ತೇನೆಂದು ಜ್ಯೋತಿ ಮನೆಯಿಂದ ಹೊರಟಿದ್ದಳು. ಟ್ಯಾಲಿ ಕ್ಲಾಸ್ ಗೆ ಹೋಗಿಬರುತ್ತೇನೆಂದು ಯಶವಂತ್ ಮನೆಯಿಂದ ಹೋಗಿದ್ದನು.
ಆದರೆ ಇಬ್ಬರು ಮನೆಗೆ ಬಾರದ ಕಾರಣ ಪೋಷಕರು ಹೆಬ್ಬಾಳ ಪೋಲಿಸ್ ಸ್ಟೇಷನ್ ಗೆ ದೂರು ನೀಡಿದ್ದರು.
ಆದರೆ ಇಬ್ಬರು ಮನೆಯ ರಿಗೆ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಉಡುಪಿಯ ಮಂದಾರ್ತಿ ಸಮೀಪದ ಹೆಗ್ಗುಂಜ್ಜೆಯಲ್ಲಿ ಸುಟ್ಟು ಕರಕಲಾದ ಕಾರ್ ಪತ್ತೆ. ಮುಂಜಾನೆ 3:00 ಗಂಟೆ ಸುಮಾರಿಗೆ ಸುಡುತ್ತಿದ್ದ ಕಾರು ಪತ್ತೆ. ನಿನ್ನೆ ಮಂಗಳೂರಿಗೆ ಬಂದು ಹುಸೇನ್ ಎಂಬವರಿಂದ ಕಾರು ಬಾಡಿಗೆ ಪಡೆದಿದ್ದರು
ಉಡುಪಿ ಬಳಿ ಕಾರಿನ ಮೇಲೆ ಪೆಟ್ರೋಲ್ ಸುರಿದಿ ಒಳಗೆ ಕುಳಿತು ಬೆಂಕಿ ಹಚ್ಚಿಕೊಂಡು ಯಶವಂತ್ ಹಾಗೂ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಉಡುಪಿ ಬ್ರಹ್ಮಾವರ ಪೋಲಿಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.
Comments