ಮಂಡ್ಯ- ಮುಗ್ದ ಮಹಿಳೆಯರನ್ನು ಯಾಮಾರಿಸ್ತಿದ್ದ ಖತರ್ನಾಕ್ ವಂಚಕನಿಗೆ ಮದ್ದೂರು ಪೋಲಿಸರು ಕೋಳ ತೊಡಿಸಿದ್ದಾರೆ.
ಚಿನ್ನಾಭರಣ ಲೂಟಿಗೆ ವೃದ್ದೆಯರು, ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡ್ತಿದ್ದ ಸಂಪತ್, ಮೈಸೂರಿನ ಹುಣಸೂರು ತಾಲೂಕಿನ ತಮ್ಮಡಹಳ್ಳಿ ಗ್ರಾಮದನು.
ವೃದ್ದೆಯರಿಗೆ ಪಿಂಚಣಿ ಕೊಡಿಸುವ ನೆಪದಲ್ಲಿ ಕತ್ತಿನಲ್ಲಿದ್ದ ಚೈನ್ ಎಗರಿಸ್ತಿದ್ದನು. ಒಬ್ಬಂಟಿ ಮಹಿಳೆಯರಿಗೆ ಮಾರಕಾಸ್ತ್ತ ತೋರಿಸಿ ಮಾಂಗಲ್ಯ ಸರ, ಚಿನ್ನಾಬರಣ ದರೋಡೆ ಮಾಡುತ್ತಿದ್ದನು.
ಚಾಮನಹಳ್ಳಿ ಗ್ರಾಮದ ವೃದ್ದೆ ಗೌರಮ್ಮ ಹಾಗೂ ಕುದುರುಗುಂಡಿ ಗ್ರಾಮದ ಸುವರ್ ಬಳಿ ಚಿನ್ನದ ಸರ ಕದ್ದಿದ್ದನು. ಮದ್ದೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧ ಮಳವಳ್ಳಿ ಡಿವೈಎಸ್ಪಿ ನವೀನ್ ಕುಮಾರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಇದೀಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಖತರ್ನಾಕ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತನಿಂದ 3.50 ಲಕ್ಷ ಮೌಲ್ಯದ 71 ಗ್ರಾಂ ನ 3 ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ.
ವಿವಿಧ ಜಿಲ್ಲೆಯಲ್ಲೂ ಹಲವು ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಈಗ ಖಾಕಿ ಬಲೆಗೆ ಬಿದ್ದಿದ್ದಾನೆ.
Comments