ಬೆಂಗಳೂರು- ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೆ ತುಂಬಾ ನೈಸ್ ಆಗಿದೆ. ರೋಡ್ ಹಂಪ್ ಗಳಂತೂ ಇಲ್ಲವೆ ಇಲ್ಲ, ಟ್ರಾಫಿಕ್ ಜಾಮ್ ಗೋಜಲು ಇಲ್ಲ. ಹೀಗಿರುವಾಗ ಬಹಳಷ್ಟು ಜನರು ಸ್ಪೀಡ್ ಗೆ ಕಂಟ್ರೋಲ್ ಇಲ್ಲದೆ ಬಹಳ ವೇಗವಾಗಿ ವಾಹನ ಚಾಲನೆ ಮಾಡುತ್ತಾರೆ. ಇದರಿಂದ ಅಪಘಾತವಾಗುತ್ತದೆ. ಈ ಕಾರಣದಿಂದ ಹೈವೆ ಅಥಾರಿಟಿ ಆಫ್ ಇಂಡಿಯಾ ಸ್ಪೀಡ್ ಬ್ರೇಕ್ ಹಾಕುತ್ತಿದೆ.
ಹೊಸ ಹೆದ್ದಾರಿ ಆದ ಮೇಲೆ ಈ ತನಕ 335 ಅಪಘಾತ ಸಂಭವಿಸಿದ್ದು, 85 ಜನರು ಮೃತಪಟ್ಟಿದ್ದಾರೆ. ಈ ಕಾರಣದಿಂದ ಹೈವೆ ಅಥಾರಿಟಿ ಆಫ್ ಇಂಡಿಯಾ ಮೈಸೂರಿನಿಂದ ಬೆಂಗಳೂರು ತನಕ ಹೆದ್ದಾರಿ ಉದ್ದಕ್ಕೂ ಅತ್ಯಾಧುನಿಕ ಕ್ಯಾಮರಾ ಅಳವಡಿಸುತ್ತಿದೆ.
ಪ್ರತಿ 800 ಮೀಟರ್ ಗೊಂದು ಎಎನ್ ಪಿಆರ್ ಅಳವಡಿಸಲಾಗುತ್ತಿದೆ. ಇದಕ್ಕೆ ಆರ್ಟಿಫಿಷಿಯಲ್ ಪ್ರೊಗ್ರಾಮಿಂಗ್ ತಂತ್ರಜ್ಞಾನ ಇರುತ್ತದೆ. ವೇಗವಾಗಿ ವಾಹನ ಚಾಲನೆ ಮಾಡಿದ್ರೆ ಆ ವಾಹನಗಳಿಗೆ ದಂಡ ವಿಧಿಸಿ ಸೀದಾ ಅವರ ಮನೆಗೆ ನೋಟಿಸ್ ಕಳುಹಿಸಲಾಗುತ್ತದೆ.
ಇದಲ್ಲದೆ ಹೆದ್ದಾರಿಯಲ್ಲಿ ಕಳ್ಳತನ, ದರೋಡೆಯಂತಹ ಕ್ರಿಮಿನಲ್ ಆಕ್ಟಿವಿಟಿ ತಪ್ಪುತ್ತದೆ. ಜೊತೆಗೆ ಅಪಘಾತವಾದರೆ ಕ್ಯಾಮರಾ ಮೂಲಕ ಆಂಬ್ಯುಲೆನ್ಸ್, ಹೆದ್ದಾರಿ ಪಡೆ ಹಾಗೂ ಪೋಲೀಸರಿಗೆ ಮಾಹಿತಿ ರವಾನೆ ಆಗುದೆ.
ಕ್ಯಾಮರಾ ಅಳವಡಿಸಲು ಡಿಪಿಆರ್ ಸಿದ್ದವಾಗುತ್ತಿದೆ. ಎಲ್ಲಾ ಅಂದು ಕೊಂಡಂತೆ ಆದರೆ ಇನ್ನೂ ಆರು ತಿಂಗಳಲ್ಲಿ ಕ್ಯಾಮರಾ ಅಳವಡಿಸ ಲಾಗುತ್ತದೆ.
Comments