Crime Alert

ಮೈಸೂರು ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ದರೋಡೆ- ಹಣ, ಚಿನ್ನಾಭರಣ ದೋಚಿ ಪರಾರಿ

0

ರಾಮನಗರ- ಬೆಂಗಳೂರು- ಮೈಸೂರು ಬೈಪಾಸ್ ರಸ್ತೆಯಲ್ಲಿ ಚಾಕು ತೋರಿಸಿ ದರೋಡೆ ಮಾಡಲಾಗಿದೆ. ಕಾರು ಕೆಟ್ಟು ನಿಂತ ವೇಳೆ ಪ್ರಯಾಣಿಕರನ್ನು ಬೆದರಿಸಿದ ದರೋಡೆಕೋರರು ಚಿನ್ನಾಭರಣ ದೋಚಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ – ದೇವರಹೊಸಹಳ್ಳಿ ಗ್ರಾಮದ ಬೈಪಾಸ್ ಬಳಿ ಈ ಘಟನೆ ನಡೆದಿದೆ. ಮೈಸೂರಿನ ಲೋಹಿತ್ ರಾವ್ ಹಾಗೂ ಸ್ನೇಹಿತ ಹಣ ಹಾಗೂ ಚಿನ್ನಾಭರಣ ಕಳೆದುಕೊಂಡವರಾಗಿದ್ದಾರೆ.

ಕಾರು ಕೆಟ್ಟ ಪರಿಣಾಮ ಟೋಯಿಂಗ್ ವಾಹನಕ್ಕಾಗಿ ಕಾಯುತ್ತಾ ನಿಂತಿದ್ದರು. ಕಾರು ಗ್ಲಾಸ್ ಹೊಡೆದು ಚಾಕು ತೋರಿಸಿ ದರೋಡೆ ಮಾಡಿದ್ದಾರೆ. ಬೆಳಗ್ಗಿನ ಜಾವ ಸುಮಾರು 1:50 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಚನ್ನಪಟ್ಟಣ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

siteadmin

ಚಪ್ಪಲಿಯಲ್ಲಿ ಅಡಗಿಸಿಟ್ಟಿದ್ರು 69 ಲಕ್ಷ ಮೌಲ್ಯದ ಚಿನ್ನ- ಪತ್ತೆ ಹಚ್ಚಿದ್ದು ಮಾತ್ರ ಬಹು ರೋಚಕ- ವಿಡಿಯೋ ನೋಡಿ

Previous article

ಮೈಸೂರಿನ ಪ್ರತಿಷ್ಠಿತ ಶ್ರೀ ರಾಯಲ್ ವಾರಿಯರ್ ಬೇಕರಿಗೆ ಟೈಮ್ಸ್ ಗ್ರೂಪ್ ಅವಾರ್ಡ್- ಪ್ರಶಸ್ತಿ ಸ್ವೀಕರಿಸಿದ ಬೇಕರಿ ಮಾಲೀಕ ನಾರಾಯಣ್

Next article

You may also like

Comments

Leave a reply

Your email address will not be published. Required fields are marked *

More in Crime Alert