ನವದೆಹಲಿ- ಕೊರೊನಾ ಲಾಕ್ ಡೌನ್ ವೇಳೆ ಬ್ಯಾಂಕ್ ಗಳ ಸಾಲ ಮರು ಪಾವತಿ ಕುರಿತಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಗ್ರಾಹಕರಿಂದ ಚಕ್ರ ಬಡ್ಡಿ ವಸೂಲಿ ಮಾಡುವ ಬ್ಯಾಂಕ್ ಗಳ ಹಣದಾಯಿತನಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ಲಾಕ್ ಡೌನ್ ಸಮಯದ ಆರು ತಿಂಗಳು ಸಾಲ ಮರು ಪಾವತಿಗೆ ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರ ಬ್ಯಾಂಕ್ ಗಳಿಗೆ ಸೂಚಿಸಿತ್ತು. ಆದರೆ ಬ್ಯಾಂಕ್ ಗಳು ಸಾಲ ಮರು ಪಾವತಿ ವಿನಾಯಿತಿ ಏನೊ ನೀಡಿತು. ಆದರೆ ಸಾಲದ ಮೇಲೆ ಬಡ್ಡಿ ಮೇಲಿನ ಬಡ್ಡಿ ಚಕ್ರ ಬಡ್ಡಿ ವಿಧಿಸಿತು. ಇದಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆಯೊಡ್ಡಿದೆ. ಆರು ತಿಂಗಳ ಸಾಲ ವಿನಾಯಿತಿ ವೇಳೆ ಯಾವುದೇ ರೀತಿಯ ದಂಡ ಅಥವಾ ಸುಸ್ತಿ ಬಡ್ಡಿ ವಿಧಿಸಬಾರದು ಎಂದು ಕೋರ್ಟ್ ಕಟ್ಟು ನಿಟ್ಟಿನ ಸೂಚನೆ ನೀಡಿದೆ.
ಆದರೆ ಹಣಕಾಸಿನ ಪ್ಯಾಕೇಜ್ ಅಥವಾ ಪರಿಹಾರ ಘೋಷಿಸಬೇಕು ಎಂದು ಸರ್ಕಾರ ಇಲ್ಲವೆ ಆರ್ ಬಿಐಗೆ ಸೂಚನೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಂಆರ್ ಶಾ ಮತ್ತು ಸಂಜೀವ್ ಖನ್ನಾ ನೇತೃತ್ವದ ನ್ಯಾಯಪೀಠ, ಸಾಲದ ಮರು ಪಾವತಿ ಕುರಿತಂತೆ ಹೀಗೆ ಹೇಳಿದೆ. ಒಂದು ವೇಳೆ ಚಕ್ರ ಬಡ್ಡಿ ಅಥವಾ ದಂಡ ವಿಧಿಸಿದ್ದರೆ ಆ ಹಣವನ್ನು ಮುಂದಿನ ಸಾಲದ ಮರು ಪಾವತಿಗೆ ಸರಿ ಹೊಂದಿಸಿಕೊಳ್ಳಬೇಕು ಎಂದು ಸೂಚಿಸಿದೆ.
Comments