ANCHOR- ಈಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಗಿಫ್ಟ್ ಬಾಕ್ಸ್ ವಾರ್ ತಾರಕಕ್ಕೇರಿದೆ.
ಮೈಸೂರಿನಲ್ಲಿ ಇಂದು ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ಮಾಡುವಂತೆ ಆಗ್ರಹಿಸಿದ್ದಾರೆ.
ಬಸವರಾಜ ಬೊಮ್ಮಾಯಿಗೆ ಈ ವಿಷಯ ಗೊತ್ತಿಲ್ವಾ?ಅವರ ಗಮನಕ್ಕೆ ಬಾರದೆ ಇಂತಹ ಕೆಲಸ ನಡೆಯುತ್ತವೆಯಾ, ಪತ್ರಕರ್ತರು ಅವರ ವಿರುದ್ಧ ಏನನ್ನೂ ಬರೆಯಬಾರದು,
ಯಾವುದೇ ವಿಷಯಗಳನ್ನ ಪ್ರಸ್ತಾಪಿಸಬಾರದು ಎಂಬುದೇ ಉದ್ದೇಶ,ಈ ಕುರಿತು ಪತ್ರಕರ್ತರು ಗಿಫ್ಟ್ ವಾಪಸ್ ,ಮಾಡಿ ಬಹಿರಂಗ ಪತ್ರ ಬರೆದಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ ಎಂದು ಅಭಿಪ್ರಾಯಪಟ್ಟರು.
ಸಿಎಂ ಬಸವರಾಜ ಬೊಮ್ಮಾಯಿಗೆ ಅಷ್ಟೂ ವಿವೇಚನೆ ಇಲ್ಲವೇ?, ಸಿಎಂ ಗಮನಕ್ಕೆ ಬಾರದೆ ಇದು ನಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್. ನಳೀನ್ ಕುಮಾರ್ ಕಟೀಲ್ ಯಾವ ಹೋರಾಟ ಮಾಡಿದ್ದಾನೆ. ಅವನು ಯಾರು ಎಂದು ಅವನ ವಿರುದ್ಧ ಹೋರಾಟ ಮಾಡಲಿ.ಕಾಂಗ್ರೆಸ್ ಪಕ್ಷ ಅಂತಹವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
Comments