ಮಂಡ್ಯ- ಕಾವೇರಿ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದಲ್ಲಿ ಸಂಭವಿಸಿದೆ.
ಕಾವೇರಿ ಗ್ರಾಮೀಣ ಬ್ಯಾಂಕ್ ನ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕಿ ಶೃತಿ (,30) ಆತ್ಮಹತ್ಯೆ ಮಾಡಕೊಂಡವರು.
ಕೊಳ್ಳೇಗಾಲದ ಮಲ್ಲಪ್ಪ ಅವರ ಪುತ್ರಿ ಶೃತಿ ಅವರು ಕಳೆದ ಏಳು ವರ್ಷದ ಹಿಂದೆ ಚಿಕ್ಕಮಗಳೂರು ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆಗೆ ವ್ಯವಸ್ಥಾಪಕಿಯಾಗಿ ನೇಮಕಗೊಂಡಿದ್ದರು.
ಮಂಡ್ಯಗೆ ವರ್ಗಾವಣೆ ಆದ ಮೇಲೆ ಶೃತಿ ವಿನಾಯಕ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿದ್ದರು. ಅವಿವಾಹಿತರಾಗಿದ್ದ ಕಾರಣ ಒಬ್ಬರೆ ವಾಸವಾಗಿದ್ದರು.
ಶೃತಿ ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದರು. ಆದರೆ ಕನಸು ನನಸು ಆಗಿರಲಿಲ್ಲ. ತೀವ್ರ ನಿರಾಸೆಯಿಂದ ಶೃತಿ ಖಿನ್ನತೆಗೆ ಒಳಗಾಗಿದ್ದರು.
ನಿನ್ನೆ ರಾತ್ರಿ ತಂದೆಗೆ ದೂರವಾಣಿ ಕರೆ ಮಾಡಿದ್ದ ಶೃತಿ ನಾನು ಬಾರದ ಊರಿಗೆ ಹೋಗುತ್ತಿದ್ದೇನೆ, ಕ್ಷಮಿಸಿ ಎಂದು ಕರೆ ಸ್ಥಗಿತ ಮಾಡಿದ್ದರು.
ಆಘಾತಗೊಂಡ ಶೃತಿ ತಂದೆ ಮಂಡ್ಯದ ಸಂಬಂಧಿಕರಿಗೆ ತಿಳಿಸಿದರು. ಅವರು ಮನೆಗೆ ಬಂದು ನೋಡುವಷ್ಟರಲ್ಲಿ ಶೃತಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಐಎಎಸ್ ಅಧಿಕಾರಿ ಆಗುವ ಕನಸು ನನಸಾಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶೃತಿ ಡೆತ್ ನೋಟ್ ಬರೆದಿದ್ದಾರೆ.
ಈ ಸಂಬಂಧ ಮಂಡ್ಯ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments