Karnataka

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ನಿಧನ- ಬ್ಯಾಂಕಾಕ್ ಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ತೀವ್ರ ಹೃದಯಾಘಾತ

0

ಬೆಂಗಳೂರು- ಚಿನ್ನಾರಿ ಮುತ್ತ ಖ್ಯಾತಿಯ ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ನಿಧನರಾಗಿದ್ದಾರೆ.

ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ವೇಳೆ ತೀವ್ರ ಹೃದಯಾಘಾತದಿಂದ ಸ್ಪಂದನ ಇಹಲೋಕ ತ್ಯಜಿಸಿದರು. ಲೋ ಬಿಪಿಯಿಂದ ಕುಸಿದು ಬಿದ್ದ ಸ್ಪಂದನ ಅವರನ್ನು ಕೂಡಲೆ ಬ್ಯಾಂಕಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಲೋ ಬಿಪಿ ತರುವಾಯ ತೀವ್ರ ಹೃದಯಾಘಾತವಾಗಿ ಸ್ಪಂದನ ಮೃತಪಟ್ಟರು.

ವಿಜಯ ರಾಘವೇಂದ್ರ ಹಾಗೂ ಸ್ಪಂದನ ದಂಪತಿಗೆ ಒಬ್ಬ ಪುತ್ರ ಇದ್ದಾನೆ.

ಸ್ಪಂದನ ಅವರ ಪಾರ್ಥಿವ ಶರೀರ ನಾಳೆ ಬೆಂಗಳೂರಿಗೆ ಬರಲಿದ್ದು, ಅಂತ್ಯಕ್ರಿಯೆ ಕಾರ್ಯ ಬೆಂಗಳೂರಿನಲ್ಲೆ ನಡೆಯಲಿದೆ. ವಿಜಯ ರಾಘವೇಂದ್ರ ಅವರು ಪಾರ್ವತಮ್ಮ ರಾಜ್ ಕುಮಾರ್ ತಮ್ಮನ ಮಗನಾಗಿದ್ದು, ಅಪ್ಪು ನಿಧನದ ಬಳಿಕ ಸ್ಪಂದನ ಸಾವು ಡಾ.ರಾಜ್ ಕುಮಾರ್ ಕುಟುಂಬಕ್ಕೆ ಮತ್ತೊಂದು ಆಘಾತವಾಗಿದೆ.

ಸ್ಪಂದನ ನಿವೃತ್ತ ಎಸಿಪಿ ಬಿ.ಕೆ.ಶಿವರಾಮ್ ಅವರ ಪುತ್ರಿ.

siteadmin

ಸಿದ್ದರಾಮಯ್ಯ ಜೀವನ ಕುರಿತ ಸಿನಿಮಾ ಮುಹೂರ್ತಕ್ಕೆ ಕೌಂಟ್ ಡೌನ್- ಸಿದ್ದರಾಮಯ್ಯ ಪಾತ್ರ ಮಾಡುವ ಹೀರೊಗಳು ಇವರೆ

Previous article

ಕಾವೇರಿ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆಗೆ ಶರಣು

Next article

You may also like

Comments

Leave a reply

Your email address will not be published. Required fields are marked *

More in Karnataka