ಮೈಸೂರು- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೂರಾರು ಜನರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದ ನೇಮಿಚಂದ್ ರಾಮ್ ಅಲಿಯಾಸ್ ನಿಮರಾಮ್ ಸರ್ವಿ ರಾಮ್ ಪೋಲಿಸರಿಗೆ ಸೆರೆ ಸಿಕ್ಕಿದ್ದಾನೆ.
ಮೈಸೂರಿನ ವಿವೇಕಾನಂದ ನಗರ ಸರ್ಕಲ್ ಬಳಿಯ ಮಾರುತಿ ಜ್ಯುವೆಲರ್ಸ್ ಮಾಲೀಕನಾದ ನೇಮಿಚಂದ್ ರಾಮ್ ಕೋಟಿ ಕೋಟಿ ಪಂಗನಾಮ ಹಾಕಿದ್ದನು. ಬಹಳಷ್ಟು ಜನರು ಇವನ ಬಳಿ ಚಿನ್ನದ ಒಡವೆಗಳನ್ನು ಗಿರವಿ ಇಟ್ಟಿದ್ದರು. ಮತ್ರೆ ಇನ್ನಷ್ಟು ಜನರು ತಿಂಗಳ ಲಕ್ಕಿ ಡಿಪ್ ಲಾಟರಿ ಚೀಟಿ ಹಾಕಿದ್ದರು. ಇದೇ ರೀತಿಯ ಹಲವು ವ್ಯವಹಾರದಿಂದ ಕೋಟ್ಯಂತರ ರೂಪಾಯಿ ಉಂಡೆ ನಾಮ ಹಾಕಿ ಕಳೆದ ಒಂದೂವರೆ ತಿಂಗಳ ಹಿಂದೆ ಎಸ್ಕೇಪ್ ಆಗಿದ್ದನು.
ಮೈಸೂರಿನಿಂದ ಬೆಂಗಳೂರಿಗೆ ಹೋಗಿ ಅಲ್ಲಿಂದ ರಾಜಸ್ಥಾನಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದನು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮೈಸೂರಿನ ಕುವೆಂಪು ನಗರ ಪೋಲಿಸರು ರಾಜಸ್ಥಾನಕ್ಕೆ ತೆರಳಿ ಬೆನ್ನತ್ತಿ ಹಿಡಿದು ಈಗ ಮೈಸೂರಿಗೆ ಕರೆ ತಂದಿದ್ದಾರೆ. ಇವನ ಬಳಿ ಒಡವೆ ಗಿರವಿ ಇಟ್ಟವರು ಹಾಗೂ ಚೀಟಿ ಹಾಕಿದವರು ಈಗ ಪೋಲಿಸ್ ಸ್ಟೇಷನ್ ಗೆ ಹೋಗಿ ಕ್ಲೈಮ್ ಮಾಡುತ್ತಿದ್ದಾರೆ. ಪೋಲಿಸರು ಇವನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
Comments