ಫಿಲ್ಮಿ ಡೆಸ್ಕ್- ಅದೃಷ್ಟ ದೇವತೆ ಅಂದರೆ ಹಿಂದೂ ದರ್ಮಿಯರ ಪಾಲಿಗೆ ಮಹಾಲಕ್ಷ್ಮಿ. ಇಂತಹ ದೈವ ಸ್ವರೂಪಿ ಅದೃಷ್ಟ ದೇವತೆ ಬಗ್ಗೆ ಕೆಟ್ಟದಾಗಿ ಮಾತಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಹಿಂದೂ ಧರ್ಮಿಯರು ಸಿಡಿದೆದ್ದಿದ್ದಾರೆ. ದರ್ಶನ್ ಮುಂದಿನ ಸಿನಿಮಾ ‘ಕ್ರಾಂತಿ’ ವಿರುದ್ಧ “ಬಾಯ್ಕಾಟ್ ಕ್ರಾಂತಿ” ಅಭಿಯಾನ ಆರಂಭವಾಗಿದೆ.
No filter pic.twitter.com/tliTlJ87Or
— ಟ್ರೋಲ್ ಹೈಕ್ಳು (@TrollHaiklu) December 8, 2022
ಕ್ರಾಂತಿ ಸಿನಿಮಾ ಸಂದರ್ಶನದ ವೇಳೆ ದಾಸ ಆಡಿದ ಮಾತು ಎಂತವರನ್ನು ಆಕ್ರೋಶಗೊಳಿಸುತ್ತದೆ. “ಅದೃಷ್ಟ ದೇವತೆ ಯಾವಾಗಲೂ ಬಾಗಿಲು ತಟ್ಟುವುದಿಲ್ಲ. ಯಾವಾಗ ಅದೃಷ್ಟ ದೇವತೆ ಬಾಗಿಲು ತಟ್ಟುತ್ತಾಳೊ ಅವಾಗ ಹಿಡಿದು ತಂದು ಬಟ್ಟೆ ಬಿಚ್ಚಿ ಬೆಡ್ ರೂಮ್ ನಲ್ಲಿ ಕೂರಿಸಬೇಕು. ಬಟ್ಟೆ ಕೊಟ್ಟರೆ. ಆಕೆ ಬೇರೊಬ್ಬರ ಮನೆಗೆ ಹೋಗುತ್ತಾಳೆ” ಎಂದು ದರ್ಶನ್ ಹೇಳಿದ ಮಾತಿನಿಂದ ಹಿಂದೂ ಧರ್ಮಿಯರು ಅಭಿಯಾನದ ಮೂಲಕ ದಂಗೆದಿದ್ದಾರೆ.
ಇಷ್ಟೆಲ್ಲಾ ಅವಾಂತರ ಆದರೂ ದರ್ಶನ್ ಕ್ಷಮೆ ಕೇಳಿಲ್ಲ. ದರ್ಶನ್ ಈ ಹೇಳಿಕೆ ವಿರುದ್ಧ ಹಿಂದೂ ದರ್ಮಿಯರು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನ ಆರಂಭಿಸಿದ್ದಾರೆ. ಬಾಯ್ಕಟ್ ದರ್ಶನ್ ಮತ್ತು ಬಾಯ್ಕಾಟ್ ಕ್ರಾಂತಿ ಎಂಬ ಅಭಿಯಾನ ಎಲ್ಲೆಡೆ ಪಸರಿಸುತ್ತಿದೆ.
Comments