ಮೊಹಾಲಿ- (ಚಂಡಿಗಡ)- ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ಜೊತೆ ಸೆಣಸಾಡಲು ಟೀಂ ಇಂಡಿಯಾ ಸನ್ನದವಾಗಿದೆ. ಟೀಂ ಇಂಡಿಯಾ ಆಟಗಾರರು ತಾಲೀಮು ನಡೆಸಲು ಹೋಗುತ್ತಿದ್ದ ಬಸ್ ನಲ್ಲಿ ಜೀವಂತ ಗುಂಡುಗಳು ಪತ್ತೆಯಾಗಿವೆ. ಇದು ಆಟಗಾರರನ್ನೆ ದಂಗಾಗಿಸಿತು.
ದಕ್ಷಿಣ ಆಫ್ರಿಕಾ ಹಾಗೂ ಟೀಮ್ ಇಂಡಿಯಾ ನಡುವೆ ಮಾರ್ಚ್ 4 ರಿಂದ ಟೆಸ್ಟ್ ಸರಣಿ ನಡೆಯಲಿದೆ. ಚಂಡಿಗಡದ ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ಕೂಡ ಆರಂಭಿಸಿದ್ದಾರೆ.
ಲಲಿತ್ ಹೋಟೆಲ್ ನಿಂದ ಇಂದು ಟೀಮ್ ಇಂಡಿಯಾ ಆಟಗಾರರು ಬಸ್ ನಲ್ಲಿ ಸ್ಟೇಡಿಯಂಗೆ ಹೋಗಬೇಕಿತ್ತು. ಆದರೆ ಆ ಬಸ್ ನಲ್ಲಿ ಜೀವಂತ ಗುಂಡುಗಳು ಪತ್ತೆಯಾಗಿವೆ.
ಎರಡು ಕಾಟ್ರಿಡ್ಜ್ ಗಳು ಪತ್ತೆಯಾಗಿದೆ. ಇವು 32 ಬೋರ್ ಪಿಸ್ತೂಲ್ ಗೆ ಬಳಸುವ ಗುಂಡುಗಳು ಇದಾಗಿದೆ.
ತರುವಾಯ ಟೀಮ್ ಇಂಡಿಯಾ ಆಟಗಾರರು ಸ್ಟೇಡಿಯಂಗೆ ಹೋಗಲು ಬೇರೆ ಬಸ್ ವ್ಯವಸ್ಥೆ ಮಾಡಲಾಯಿತು.
ಸ್ಥಳಕ್ಕೆ ಬಂದ ಪೋಲಿಸರು ಶ್ವಾನದಳದೊಂದಿಗೆ ತಪಾಸಣೆ ನಡೆಸಿದರು. ಇದು ಗಂಭೀರ ವಿಚಾರವಾದ ಕಾರಣ ತನಿಖೆ ಚುರುಕುಗೊಳಿಸಿದ್ದಾರೆ.
ಇನ್ನು ಶ್ರೀಲಂಕಾ ಆಟಗಾರರು ಕ್ವಾರಂಟೈನ್ ನಲ್ಲಿದ್ದು, ಹೋಟೆಲ್ ಬಿಟ್ಟು ಹೊರ ಬಂದಿಲ್ಲ.
Comments