ಮುಂಬೈ- ಐಪಿಎಲ್ ಗೆ ಇನ್ನು ಎರಡು ದಿನ ಇರುವ ಮೊದಲು ಮಹೇಂದ್ರ ಸಿಂಗ್ ಧೋನಿ ತಮ್ಮ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ಸಿಗೆ ಧೋನಿ ಗುಡ್ ಬೈ ಹೇಳಿದ್ದಾರೆ. ಇದನ್ನು ಸಿಎಸ್ ಕೆ ಮ್ಯಾನೇಜ್ ಮೆಂಟ್ ಟ್ವಿಟರ್ ಮೂಲಕ ತಿಳಿಸಿದೆ.
ಸಿಎಸ್ ಕೆಯ 15 ಆವೃತ್ತಿಗಳಿಗೂ ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ ಆಗಿದ್ದರು. ಧೋನಿ ಕ್ಯಾಪ್ಟನ್ಸಿಯಲ್ಲಿ ಸಿಎಸ್ ಕೆ 4 ಬಾರಿ ಕಪ್ ಪಡೆದು ವಿಜಯೋತ್ಸವ ಆಚರಿಸಿತ್ತು. ಅಷ್ಟೆ ಅಲ್ಲೆದೆ ಧೋನಿ ಕ್ಯಾಪ್ಟನ್ಸಿಯಲ್ಲಿ ಸಿಎಸ್ ಕೆ 9 ಬಾರಿ ಫೈನಲ್ ಪ್ರವೇಶಿಸಿತ್ತು. ಆದರೆ ಈಗ ಧೋನಿ ಸಿಎಸ್ ಕೆ ನಾಯಕತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಕೂಲ್ ಕ್ಯಾಪ್ಟನ್ ಧೋನಿ ರಾಜಿನಾಮೆ ನೀಡಿರುವುದು ಏಕೆ ಎಂಬ ವಿಚಾರ ಇನ್ನು ತಿಳಿದು ಬಂದಿಲ್ಲ.
ಇನ್ನು ರವೀಂದ್ರ ಜೆಡೆಜಾ ಸಿಎಸ್ ಕೆ ತಂಡದ ಮುಂದಿನ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಜೆಡೆಜಾ ಐಪಿಎಲ್ ನಲ್ಲಿ ಯಾವ ರೀತಿಯಲ್ಲಿ ಮೋಡಿ ಮಾಡಲಿದ್ದಾರೆ ಎಂದ ಕಾದು ನೋಡಬೇಕಿದೆ.
Comments