ಮಂಡ್ಯ- ನಿಮ್ಮ ಮದುವೆ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ಮಾಜಿ ಸಂಸದೆ, ನಟಿ ರಮ್ಯಾ ಮಂಡ್ಯದಲ್ಲಿ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.
“ನನಗೆ ಫಸ್ಟ್ ಹುಡುಗನನ್ನ ಹುಡುಕಿ. ಗೌಡರ ಹುಡುಗ ಸಿಕ್ತಾರೆ ಅಂದ್ರೆ ನೋಡಿ.
ನೀವೆ ಹುಡುಕಿ ನನಗೆ ಒಬ್ಬರು ಕಾಣಿಸ್ತಿಲ್ಲ.” ಎಂದು ರಮ್ಯಾ ಹೇಳಿದರು.
ನನಗೂ ಹುಡುಗನನ್ನ ನೋಡಿ ನೋಡಿ ಸಾಕಾಗೋಯ್ತು, ಸ್ವಯಂ ವರನೆ ಮಾಡಿ ಎಂದು ರಮ್ಯಾ ನಸುನಕ್ಕರು.
ನಾನು ಮಂಡ್ಯಕ್ಕೆ ಬರ್ತಾ ಹೋಗ್ತಾ ಇದೀನಿ. ಮೊನ್ನೆ ನಿಮಿಷಾಂಭ ದೇವಸ್ಥಾನಕ್ಕೆ ಬಂದಿದ್ದೆ. ಮಂಡ್ಯದಲ್ಲಿ ನಮ್ಮ ಸಂಬಂಧಿಕರು ನೆಂಟರು ಇದ್ದಾರೆ. ನಾನು ಯಾವಾಗಲೂ ಬರ್ತಾ ಇರ್ತೀನಿ ಕಾಣಿಸಿಕೊಳ್ಳಲ್ಲ ಅಷ್ಟೇ.ಇವತ್ತು ನಾನು ಸ್ಟಾರ್ ಕ್ಯಾಂಪೇನರ್ ಆಗಿ ಬಂದಿದ್ದೇನೆ ಅಷ್ಟೇ.ಕಾಂಗ್ರೆಸ್ಗೆ ಸಫೋರ್ಟ್ ಮಾಡಲು ನಾನು ಬಂದಿದ್ದೇನೆ.ಸಕ್ರಿಯ ರಾಜಕೀಯಕ್ಕೆ ಬರುವುದಾಗಿ ಯೋಚನೆ ಮಾಡಿಲ್ಲ ಎಂದರು.
ಅಂಬರೀಶ್ ಸಾವಿಗೆ ತಾನು ಬರದ ವಿಚಾರದ ಬಗ್ಗೆ ರಮ್ಯಾ ಪ್ರತಿಕ್ರಿಯೆ ನೀಡಿದರು. ನನಗೆ ಆಗ ಟ್ಯೂಮರ್ ಬಂದಿತ್ತು. ನಾನು ಆಗ ಸರ್ಜರಿ ಮಾಡಿಸಿದ್ದೆ. ನಾನು ಪಬ್ಲಿಕ್ ಆಗಿ ಬಂದು ದುಃಖ ಹಂಚಿಕೊಳ್ಳೋ ಅಭ್ಯಾಸ ಇಲ್ಲ. ಬೇರೆ ಅವರು ಬಂದು ಕ್ಯಾಮೆರಾ ಮುಂದೆ ಬಂದು ಹಂಚಿಕೊಳ್ಳುತ್ತಾರೆ. ನಾನು ಚಿಕ್ಕವಳಿಂದ ಸ್ವತಂತ್ರವಾಗಿ ಇದ್ದೇನೆ.ನಾನು ಏನೇ ಇದ್ರು ಕೆಲಸದ ಬಗ್ಗೆ ಮಾತಾಡುತ್ತೇನೆ ಅಷ್ಟೇ ಎಂದು ತಿಳಿಸಿದರು.
ಪರ್ಸನಲ್ ವಿಷಯಗಳನ್ನು ಮಾತನಾಡಲು ಹೋಗಲ್ಲ. ಹೀಗಾಗಿ ಎಲ್ಲರೂ ಏನೇನೋ ಹಬ್ಬಿಸುತ್ತಾರೆ. ಅಪಪ್ರಚಾರ ಮಾಡಿರುವುದು ನನಗೆ ಬೇಸರವಾಗಿದೆ. ಆದರೆ ಅದರ ಬಗ್ಗೆ ಹೇಳಿ ಸಿಂಪತಿ ತೆಗದುಕೊಳ್ಳೋಕೆ ಇಷ್ಟ ಇಲ್ಲ ಎಂದು ರಮ್ಯಾ ಸ್ಪಷ್ಟಪಡಿಸಿದರು.
Comments