ಮೈಸೂರು/ಬೆಂಗಳೂರು- ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾರ್ಡಿಯಾಕ್ ಅರೆಸ್ಟ್ ನಿಂದ ಮೃತಪಟ್ಟ ಆಘಾತದಿಂದ ಬೆಚ್ಚಿ ಬಿದ್ದಿರುವ ಮೈಸೂರು ಹಾಗೂ ಬೆಂಗಳೂರಿನ ನೂರಾರು ಜನರು ಈಗ ಜಯದೇವ ಹೃದ್ರೋಗ ಆಸ್ಪತ್ರೆಗೆ ತಪಾಸಣೆಗೆಂದು ಹೆಚ್ಚಾಗಿ ಬರುತ್ತಿದ್ದಾರೆ.
ಮೈಸೂರಿನ ಕೆಆರ್ ಎಸ್ ರಸ್ತೆಯಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ತಪಾಸಣೆಗೆಂದು ಉದ್ದನೆ ಸಾಲು ಇಂದು ಕಂಡು ಬಂದಿದೆ.
ಮೈಸೂರು ಹಾಗೂ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಕಳೆದ ಎರಡು ದಿನದ ಅವಧಿಯಲ್ಲಿ ತಪಾಸಣೆಗೆ ಬರುವರ ಸಂಖ್ಯೆ ಶೇಕಡಾ 25 ಕ್ಕಿಂತ ಹೆಚ್ಚಾಗಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ 105 ಹೃದ್ರೋಗ ತಜ್ಞರಿದ್ದಾರೆ. ಪ್ರತಿದಿನ 1,200 ಹೊರ ರೋಗಿಗಳು ಬರುತ್ತಿದ್ದರು. ಆದರೆ ಈಗ 1,500 ರೋಗಿಗಳು ಬರುತ್ತಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕರೂ ಆದ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ಅತಿಯಾದ ಜಿಮ್ ವರ್ಕೌಟ್ ನಿಂದ ಪುನೀತ್ ರಾಜ್ ಕುಮಾರ್ ಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ ಎಂಬ ಚರ್ಚೆಯ ಹಿನ್ನೆಲೆ ಬಹಳಷ್ಟು ಜನರು ಈಗ ಜಿಮ್ ನಿಂದ ವಿಮುಕ ರಾಗುತ್ತಿದ್ದಾರೆ ಎನ್ನಲಾಗಿದೆ.
Comments