ಬೆಂಗಳೂರು- ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಉಸಿರು ನಿಲ್ಲಿಸುವ ಮುನ್ನ ನಡೆದ ಘಟನೆಯನ್ನು ಅವರ ಕುಟುಂಬದ ತಜ್ಞ ವೈದ್ಯರಾದ ಡಾ.ರಮಣ ಅವರು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾರೆ.
“ಅಪ್ಪು ಮತ್ತು ಅಶ್ವಿನಿಯವರು ಒಟ್ಟಿಗೆ ನಮ್ಮ ಕ್ಲಿನಿಕ್ ಗೆ ಬಂದರು. ಏನು ವಿಚಾರ ಅಂತ ವಿಚಾರಿಸಿದಾಗ, ತಮ್ಮ ದೇಹದಲ್ಲಿ ಆಗಿರುವ ಬೆಳವಣಿಗೆಯನ್ನು ತಿಳಿಸಿದರು. ಈಗ ತಾನೆ ವರ್ಕೌಟ್ ಮುಗಿಸಿದ್ದೇನೆ. ಬಾಕ್ಸಿಂಗ್ ರೌಂಡ್ ಮುಗಿಸಿ, ಸ್ಟೀಮ್ ತೆಗೆದುಕೊಂಡಿದ್ದೇನೆ. ಆದರೆ ಏಕೋ ಆಯಾಸ ಅನ್ನಿಸುತ್ತಿದೆ” ಎಂದು ಪುನೀತ್ ಹೇಳಿದರು.
ಪುನೀತ್ ಅವರನ್ನು ಪರೀಕ್ಷೆ ಮಾಡಿದಾಗ ತುಂಬಾ ಬೆವರುತ್ತಿದ್ದರು. ಇದಕ್ಕೆ ಕಾರಣ ಕೇಳಿದಾಗ “ಜಿಮ್ ವರ್ಕೌಟ್ ಮುಗಿದಾಗ ಈ ರೀತಿ ಬೆವರುವುದು ಸಹಜ ಅಂದ್ರು. ತಕ್ಷಣ ಇಸಿಜಿ ಮಾಡಿದಾಗ ಅಪ್ಪು ಚೆನ್ನಾಗಿಯೇ ಇದ್ದರು. ಅವರ ದೇಹದ ಪರಿಸ್ಥಿತಿ ನೋಡಿ ವಿಕ್ರಂ ಆಸ್ಪತ್ರೆಗೆ ಕಳುಸಿದೆ. ವಿಕ್ರಂ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಟ್ರೀಟ್ ಮೆಂಟ್ ಗೆ ಅವರು ಹೋಗುವಷ್ಟರಲ್ಲಿ ತಯಾರಿ ಮಾಡಿಸಿದ್ದೆ” ಎಂದು ಡಾ.ರಮಣ ಹೇಳಿದರು.
ಅಂತಿಮವಾಗಿ ಅಪ್ಪು ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಅರ್ತಾಥ್ ಹೃದಯ ಬಡಿತವೇ ನಿಂತಿದೆ. ಹೀಗಾದಾಗ ಏನೆ ಮಾಡಿದರೂ ರೋಗಿಯನ್ನು ಬದುಕಿಸುವುದು ಕಷ್ಟ ಎಂದು ಡಾ.ರಮಣ ಅಭಿಪ್ರ್ರಾಯಪಟ್ಟಿದ್ದಾರೆ. ಡಾ.ರಾಜ್ ಕುಮಾರ್ ಅವರಿಗೆ ಕೂಡ ಇದೇ ರೀತಿಯಲ್ಲೆ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು ಎಂದರು.
Comments