Accident

ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆ ಉದ್ಘಾಟನೆಯಾದ ಕೆಲವೆ ಗಂಟೆಯಲ್ಲಿ ಕಾರು ಪಲ್ಟಿ

0

ಮಂಡ್ಯ- ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ಹೈವೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿ ಕೆಲ ಗಂಟೆ ಕಳೆದಿಲ್ಲ ಆಗಲೆ ಹೆದ್ದಾರಿಯಲ್ಲಿ ಕಾರು ಪಲ್ಟಿಯಾಗಿದೆ.

ಮೋದಿ ಉದ್ಘಾಟನೆ ದಿನವೇ ಹೆದ್ದಾರಿಯಲ್ಲಿ ಅಪಘಾತವಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಕಾರು ಪಲ್ಟಿಯಾಗಿದೆ.

ಆಶ್ಚರ್ಯಕರ ರೀತಿಯಲ್ಲಿ ಕಾರಿನಲ್ಲಿದ್ದ ಮೂವರು ಪ್ರಾಣಾಪಾತದಿಂದ ಪಾರಾಗಿದ್ದಾರೆ.  ಮದ್ದೂರು ಪಟ್ಟಣದ ಶಿಂಷಾ ನದಿ ಸೇತುವೆ ಬಳಿಯ ಫ್ಲೈ ಓವರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಕಾರಿನಲ್ಲಿದ್ದ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಮೂವರಿಗೂ ಸಣ್ಣ ಪುಟ್ಟ ಗಾಯವಾಗಿದೆ.
ಕಾರಿನಲ್ಲಿದ್ದವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮದ್ದೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌ ನಡೆದಿದೆ.

siteadmin

“ಮಂಡ್ಯ ಇಸ್ ಇಂಡಿಯಾ”- ಸಕ್ಕರೆ ನಾಡನ್ನು ಹಾಡಿ ಹೊಗಳಿ ಕಾಂಗ್ರೆಸ್ ಗೆ ಟಕ್ಕರ್ ಕೊಟ್ಟ ಬೊಮ್ಮಾಯಿ

Previous article

ಐಪಿಎಸ್ ಅಧಿಕಾರಿ ಜೊತೆ ಮಹಿಳಾ ಪಿಎಸ್ ಐ ಸರಸ ಸಲ್ಲಾಪ- ಪತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಾಗ ಪ್ರಲಾಪ- ಅರೆ ಬೆತ್ತಲು ದೃಶ್ಯ ರೆಕಾರ್ಡ್

Next article

You may also like

Comments

Leave a reply

Your email address will not be published. Required fields are marked *

More in Accident