ರಾಮನಗರ- ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೆನಲ್ಲಿ ಇವತ್ತು ಮತ್ತೊಂದು ಅಪಘಾತ ಸಂಭವಿಸಿದೆ, ವೈಜ್ಞಾನಿಕ ಗುಣಮಟ್ಟದಲ್ಲಿ ರಸ್ತೆ ನಿರ್ಮಾಣ ಮಾಡಿರುವ ಕಾರಣ ಅಪಘಾತ ಆಗಲ್ಲ ಎಂದು ಭಾವಿಸಿದ್ರು. ಆದರೆ ಪ್ರತಿದಿನ ಒಂದೊಂದು ಅಪಘಾತ ನಡೆಯುತ್ತಲೆ ಇದೆ.
ರಾಮನಗರ ಬೈಪಾಸ್ ನ ಸಂಘಬಸವನ ದೊಡ್ಡಿಯ ಮೇಲ್ಸ್ಸೆತುವೆಯಲ್ಲಿ ಕಾರು ಹಾಗೂ ಟಿಪ್ಪರ್ ನಡುವೆ ಅಪಘಾತವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಕಾರಿನಲ್ಲಿದ್ದವರು ಸೇಫ್ ಆಗಿದ್ದಾರೆ.
ಮೇಲ್ಸುತುವೆಗೆ ಟಿಪ್ಪರ್ ಒರಗಿ ನಿಂತಿದೆ. ಒಂದು ವೇಳೆ ಕೆಳಗೆ ಉರುಳಿ ಬಿದ್ದಿದ್ದರೆ, ಕೆಳಗೆ ಹಾದು ಹೋಗುತ್ತಿದ್ದ ವಾಹನಗಳ ಮೇಲೆ ಹಾರಿ ದೊಡ್ಡ ಅನಾಹುತ ಆಗುತ್ತಿತ್ತು. ಸದ್ಯ ಅಂತಹ ಅನಾಹುತ ಆಗಲಿಲ್ಲ.
ಹೊಸ ಹೈವೆ ಏನೊ ಆಯಿತು ಆದರೆ ಅಪಘಾತ ತಪ್ಪಿಸುವುದು ಈಗ ದೊಡ್ಡ ಸವಾಲು
Comments