ಬೆಂಗಳೂರಲ್ಲಿ ಹಿಟ್ ಅಂಡ್ ರನ್ ಪ್ರಕರಣ..!
ಕಾರು ಬ್ಯಾನೆಟ್ ಮೇಲೆ ಕುಳಿತವನ ಎಳೆದೊಯ್ದು ಪುಂಡಾಟ..
ಬ್ಯಾನೆಟ್ ಮೇಲೆ ಮಲಗಿದ್ರು ಕಾರು ಚಲಾಯಿಸಿ ಹುಚ್ಚಾಟ..
400 ಮೀಟರ್ ನಷ್ಟು ದೂರ ಬ್ಯಾನೆಟ್ ಮೇಲೆ ಎಳೆದೊಯ್ದ ಚಾಲಕ..
ಮಲ್ಲೇಶ್ವರಂ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ..
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ..
ಮೊಹಮ್ಮದ್ ಮುನೀರ್ ಎಂಬಾತನಿಂದ ಕೃತ್ಯ..
ಕ್ಯಾಬ್ ಚಾಲಕ ಅಶ್ವತ್ಥ್ ನನ್ನ ಬ್ಯಾನೆಟ್ ಮೇಲೆ ಹೊತ್ತಯ್ದಿರೋ ಮುನೀರ್..
ಜನವರಿ 15 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ..
ಮಲ್ಲೇಶ್ವರಂ 18 ನೇ ಕ್ರಾಸ್ ನಲ್ಲಿ ನಡೆದಿದ್ದ ಘಟನೆ..
ಸರ್ಕಲ್ ಮಾರಮ್ಮ ದೇವಸ್ಥಾನ ಬಳಿಯಿಂದ ಬ್ಯಾನೆಟ್ ಮೇಲೆ ಎಳೆದೊಯ್ದಿರೋ ಚಾಲಕ..
18 ನೇ ಕ್ರಾಸ್ ಸಿಗ್ನಲ್ ವರೆಗೆ ಬ್ಯಾನೆಟ್ ಮೇಲೆ ಎಳೆದೊಯ್ದು ಪುಂಡಾಟ..
ಸ್ಥಳೀಯರು ಹಿಂದೆ ಹಿಂದೆ ಓಡಿಬಂದ್ರು ಕಾರು ನಿಲ್ಲಿಸದ ಚಾಲಕ..
ಸಡನ್ ಆಗಿ ಬ್ರೇಕ್ ಹೊಡೆದು ಕೆಳಗೆ ಬೀಳಿಸಲು ಯತ್ನ..
ಸರ್ಕಲ್ ಮಾರಮ್ಮ ಸರ್ಕಲ್ ನಲ್ಲಿ ಕ್ಯಾಬ್ ಗೆ ಡಿಕ್ಕಿ ಹೊಡೆದಿದ್ದ ಕಾರು..
ಕಾರು ಚಾಲಕನನ್ನು ನಿಲ್ಲಿಸುವಂತೆ ದುಂಬಾಲು ಬಿದ್ದಿದ್ದ ಕ್ಯಾಬ್ ಚಾಲಕ..
ಈ ವೇಳೆ ಕಾರು ನಿಲ್ಲಸದೆ ಎಸ್ಕೇಪ್ ಆಗಲು ಯತ್ನ..
ಕಾರಿನ ಮುಂದೆ ನಿಂತು ಕೆಳಗೆ ಬರುವಂತೆ ಪಟ್ಟು..
ತಕ್ಷಣ ಕಾರು ಚಲಾಯಿಸಿದ ಚಾಲಕ
ಈ ವೇಳೆ ಬ್ಯಾನೆಟ್ ಮೇಲೆ ಕುಳಿತ ಕ್ಯಾಬ್ ಚಾಲಕ ಅಶ್ವತ್ಥ್..
ಬ್ಯಾನೆಟ್ ಮೇಲೆ ಮಲಗಿದ್ರೂ ಡೋಂಟ್ ಕೇರ್..
ಹಾಗೆಯೇ ಚಲಾಯಿಸಿಕೊಂಡು ಹೋಗಿರೋ ಮುನೀರ್..
ಸಿಗ್ನಲ್ ಬಳಿ ಹೋಗ್ತಿದ್ದಂತೆ ಕಾರು ಅಡ್ಡಗಟ್ಟ ಸ್ಥಳೀಯರು..
ಸ್ಥಳಕ್ಕೆ ಆಗಮಿಸಿದ್ದ ಮಲ್ಲೇಶ್ವರಂ ಹೊಯ್ಸಳ ಸಿಬ್ಬಂದಿ..
ಕಾರು ಚಾಲಕನನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ..
ನಂತರ ಎನ್ ಸಿ ಆರ್ ದಾಖಲಿಸಿದ್ದ ಮಲ್ಲೇಶ್ವರಂ ಪೊಲೀಸರು..
ಸದ್ಯ ನೊಟೀಸ್ ನೀಡಿ ಚಾಲನಿಗೆ ವಿಚಾರಣೆ ನಡೆಸಿರೋ ಪೊಲೀಸರು..
Comments