ನಾಗರಹಾವು ಅಂದ್ರೆ ಆಟದ ವಸ್ತು ಅಂತ ತಿಳಿದಿದ್ದ ಈ ವೃದ್ಧ. ಮನೆಯೊಳಗೆ ಹೊಕ್ಕಿದ್ದ ನಾಗರಹಾವು ಹಿಡಿದ ಈತ ಅದರೊಡನೆ ಒಂದು ಗಂಟೆಗೂ ಹೆಚ್ಚು ಕಾಲ ಆಟವಾಡಿದ್ದಾನೆ.
ಅಂದ ಹಾಗೆ ಈತನ ಹೆಸರು ಬಸವರಾಜ್ ಪೂಜಾರಿ. ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದವನು.
ಮನೆಯಲ್ಲಿದ್ದ ಹಾವನ್ನು ಹಿಡಿದ ಬಸವರಾಜ್, ಅದನ್ನು ಊರಿನ ಹೊರಗೆ ಇರುವ ಹೊಲಕ್ಕೆ ಬಿಟ್ಟಿದ್ದರೆ ಆಗುತ್ತಿತ್ತು. ಆದರೆ ನಾಗರಹಾವಿನ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ಆಟವಾಡಿದ್ದಾನೆ. ಈ ವೇಳೆ ರೊಚ್ಚಿಗೆದ್ದ ನಾಗರಹಾವು ಬಸವರಾಜ್ ಗೆ ಸಿಕ್ಕ ಸಿಕ್ಕ ಕಡೆ ಕಚ್ಚಿದೆ.
ಇದರಿಂದ ವಿಷ ಹೊಕ್ಕಿ ಬಸವರಾಜ್ ಸಾವನ್ನಪ್ಪಿದ್ದಾನೆ. ಅಷ್ಟೆ ಅಲ್ಲದೆ ತನ್ನೊಡನೆ ಆಟವಾಡಿದ ವೃದ್ಧನನ್ನು ಸಾಯಿಸಿದ ನಾಗರಹಾವು ತಾನು ಕೂಡ ಪ್ರಾಣ ಬಿಟ್ಟಿದೆ.
Comments