ಮಂಡ್ಯ- ಸಿನಿಮಾ ಶೂಟಿಂಗ್ ನವರು ಬಣ್ಣ ಹಾಗೂ ಹೂ ಸುರಿದು ಕಲುಷಿತಗೊಳಿಸಿರುವ ಮೇಲುಕೋಟೆಯ ತಂಗಿ ಕೊಳದ ಸ್ಥಿತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತಂಗಿ ಕೊಳದ ನೀರು ಈಗ ಪೂರ್ಣವಾಗಿ ಸಗಣಿ ಬಣ್ಣಕ್ಕೆ ತಿರುಗಿದೆ.
ಅಕ್ಕ ತಂಗಿ ಕೊಳದಲ್ಲಿ ಹಾಗಾಗೆ ಸಿನಿಮಾ ಶೂಟಿಂಗ್ ನಡೆಯುತ್ತದೆ. ಸಿನಿಮಾದವರು ಯಡವಟ್ಟು ಮಾಡುವಾಗ ಅಲ್ಲಿನ ಉಸ್ತುವಾರಿ ಸಿಬ್ಬಂದಿಗಳು ಎಲ್ಲಿ ಹೋಗಿದ್ದರು ಎಂಬ ಪ್ರಶ್ನೆ ಎದುರಾಗಿದೆ.
ಇದನ್ನು ಪ್ರಾಚ್ಯವಸ್ತು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ತಂಗಿ ಕೊಳದ ನೀರಿನ ಮಾದರಿಗಳನ್ನು ಸಂಗ್ರಹಿಸಿ ಈಗ ಲ್ಯಾಬ್ ಗೆ ಕಳುಹಿಸಲಾಗಿದೆ. ಲ್ಯಾಬ್ ರಿಪೋರ್ಟ್ ಬಂದ ಮೇಲೆ ನೀರಿನ ಸ್ಥಿತಿ ಹೇಗಿದೆ ಎಂದು ತಿಳಿಯುತ್ತದೆ.
ತರುವಾಯ ತಂಗಿ ಕೊಳದ ನೀರನ್ನು ಪೂರ್ಣ ಪ್ರಮಾಣದಲ್ಲಿ ತೆಗೆದು ಹೊಸ ನೀರು ಬಿಡಲು ತೀರ್ಮಾನ ಮಾಡಲಾಗಿದೆ. ಹಾಗೆಯೆ ಮುಂದೆ ಈ ಎರಡು ಕೊಳದಲ್ಲಿ ಸಿನಿಮಾ ಶೂಟಿಂಗ್ ಮಾಡುವ ವೇಳೆ ಯಾವುದೇ ಯಡವಟ್ಟು ಮಾಡದಂತೆ ಅವರಿಗೆ ಕಟ್ಟು ನಿಟ್ಟಿನ ಆದೇಶ ನೀಡಲು ಕೂಡ ನಿರ್ಧಾರ ಮಾಡಲಾಗಿದೆ.
Comments