ಬೇಂಗಳೂರು- ಪೇಜಾವರ ಶ್ರೀಗಳ ಬಗ್ಗೆ ನಾದಬ್ರಹ್ಮ ಹಂಸಲೇಖ ವಿವಾದಾತ್ಮಕ ಹೇಳಿಕೆ ನೀಡಿ ಕ್ಷಮೆಯಾಚಿಸಿದ್ರೂ ಈ ಪ್ರಕರಣ ಮಾತ್ರ ಅಂತ್ಯ ಕಾಣುತ್ತಿಲ್ಲ.
ಬೆಂಗಳೂರಿನ ಬಸವನಗುಡಿ ಪೋಲಿಸ್ ಸ್ಟೇಷನ್ ನಲ್ಲಿ ಎಸ್.ಎನ್.ಅರವಿಂದ್ ಸೇರಿದಂತೆ ಕಲವರು ಹಂಸಲೇಖ ವಿರುದ್ಧ ದೂರು ದಾಖಲಿಸಿದ್ದಾರೆ.
ಆದರೆ ಈ ಪ್ರಕರಣ ರದ್ದು ಮಾಡುವಂತೆ ಹಂಸಲೇಖ ಅಲಿಯಾಸ್ ಗಂಗರಾಜು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದರು.
ಈ ವೇಳೆ ವಕೀಲ ಕಾಶಿನಾಥ್ ಹಾಗೂ ಸಿ.ಎಸ್.ದ್ವಾರಕನಾಥ್ ಹಂಸಲೇಖ ಪರ ವಾದ ಮಂಡಿಸಿದ್ರು. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಡಾ.ಮುರುಳೀಧರ್ ನೀಡಿದ್ದ ದೂರಿನಡಿ ದಾಖಲಾಗಿದ್ದ ಪ್ರಕರಣಕ್ಕೆ ತಡೆ ನೀಡಿದೆ.
Comments